ನ್ಯೂಸ್ ನಾಟೌಟ್: ಕಾಡಿನ ಒಳಗೆ ಸರಿಸುಮಾರು ಮೂರು ತಿಂಗಳ ಹೆಣ್ಣು ಮಗುವೊಂದು ಪತ್ತೆಯಾಗಿರುವ ಆಘಾತಕಾರಿ ಘಟನೆ ಬಗ್ಗೆ ವರದಿಯಾಗಿದೆ.ಇಂದು( ಮಾ. 22ರ ಬೆಳಿಗ್ಗೆ ) 9.15ರ ಹೊತ್ತಿಗೆ ಈ ಘಟನೆ ನಡೆದಿದ್ದು, ಸುತ್ತಲೂ ನೆರೆದ ಜನ ಮಗು ಮೇಲೆ ಕನಿಕರ ವ್ಯಕ್ತ ಪಡಿಸಿದ್ದಾರೆ.
ಗುಲಾಬಿ ಅನ್ನುವ ಮಹಿಳೆ ಉಜಿರೆಯಿಂದ ಮಾಯದಲ್ಲಿರುವ ತನ್ನ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿ ಬಂದಿದೆ. ಈ ಸಂದರ್ಭ ಹೋಗಿ ನೋಡಿದಾಗ ಹೆಣ್ಣು ಮಗು ಪತ್ತೆಯಾಗಿದೆ.
ತಕ್ಷಣ ಬೆಳಾಲು ಗ್ರಾ. ಪಂ. ಅಧ್ಯಕ್ಷೆ ವಿದ್ಯಾ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ವಿದ್ಯಾ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ಆರೋಗ್ಯಾಧಿಕಾರಿ ಮಂಜು ಅವರು ಮಗುವಿನ ಆರೋಗ್ಯ ತಪಾಸಣೆ ಮಾಡಿದ್ದು, ಮಗು ಅರೋಗ್ಯವಾಗಿರುವ ಬಗ್ಗೆ ಖಚಿತ ಮಾಹಿತಿ ವ್ಯಕ್ತ ಪಡಿಸಿದ್ದಾರೆ.