Latestಕರಾವಳಿ

ಬಂಟ್ವಾಳ: ಬೈಕ್‌ ಸವಾರನ ಮೇಲೆ ಕಲ್ಲೆಸೆತ, ಐದು ತಿಂಗಳ ಬಳಿಕ  ದೂರು, ಪ್ರಕರಣ ದಾಖಲು..!

408

ನ್ಯೂಸ್‌ ನಾಟೌಟ್‌: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿ ಉಪ್ಪಿನಂಗಡಿಯ ಸಿನಾನ್ ಫೈಝಿ ಎಂಬ ವ್ಯಕ್ತಿಯ ಮೇಲೆ ಐದು ತಿಂಗಳ ಹಿಂದೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿ ಇದೀಗ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಬಡಗಬೆಳ್ಳೂರು ನಿವಾಸಿ ಶಮೀರ್ (31) ಎಂಬಾತ ನೀಡಿದ ದೂರಿನಂತೆ ಡಿಸೆಂಬರ್ 29, 2024ರಂದು ಕೊಳತ್ತಮಜಲು ಎಂಬಲ್ಲಿ ಧಾರ್ಮಿಕ ಪ್ರವಚನ ಮುಗಿಸಿ, ಮಧ್ಯಾಹ್ನ ಬೈಕಿನಲ್ಲಿ ಹೋಗಲೆಂದು ತೆರಳುತ್ತಿರುವಾಗ ಉಪ್ಪಿನಂಗಡಿಯ ಸಿನಾನ್ ಪೈಝಿ ಎಂಬವರ ಮೇಲೆ ತೇಜಾಕ್ಷ ಎಂಬಾತ ಕಲ್ಲೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ಇದ್ದಕ್ಕಿದ್ದಂತೆ ಕಲ್ಲನ್ನು ಎತ್ತಿ ಹಿಂದಿನಿಂದ ಬಲವಂತವಾಗಿ ಸಿನಾನ್ ಫೈಝಿರವರ ಮೇಲೆ ಎಸೆದಿದ್ದಾನೆ. ಆದರೆ ಅದೃಷ್ಟವಶಾತ್, ಸಿನಾನ್ ಕಲ್ಲನ್ನು ತಪ್ಪಿಸಿಕೊಂಡು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ದೂರುದಾರ ಮತ್ತು ಸಿನಾನ್ ಪ್ರೈಝಿ ಭಯದಿಂದ ಮೌನವಾಗಿದ್ದರು. ಇದೀಗ ಮೇ 31 ರಂದು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (ಬಿಎನ್‌ಎಸ್) ಸೆಕ್ಷನ್ 110 , ಅಪರಾಧ ಸಂಖ್ಯೆ 58/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

See also  ಯುಟ್ಯೂಬರ್ ಸಮೀರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು!
  Ad Widget   Ad Widget   Ad Widget   Ad Widget   Ad Widget   Ad Widget   Ad Widget