ಬೆಂಗಳೂರು

ಕಟ್ಟಡದ ಸಂದಿಯಲ್ಲಿ ಹಸುಗೂಸು ಎಸೆದು ಹೋದ ಪಾಪಿಗಳು ಯಾರು? ಇಲಿ, ಹೆಗ್ಗಣ ಕಚ್ಚಿಸಿಕೊಂಡು ರಾತ್ರಿಯಿಡೀ ಒಂಟಿಯಾಗಿ ಕಾಲ ಕಳೆದ ಒಂದು ದಿನದ ಕಂದಮ್ಮ..!

158

ನ್ಯೂಸ್‌ ನಾಟೌಟ್‌ : ಪಾಪಿಗಳು  ಕೇವಲ ಒಂದು ದಿನದ ಎಳೆಯ ಹಸುಗೂಸನ್ನು ಎರಡು ಕಟ್ಟಡಗಳ ನಡುವಿನ ಸಂದಿಯಲ್ಲಿ ಎಸೆದು ಹೋಗಿರುವ ಮನಕಲಕುವ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ತಿಲಕ್‌ನಗರ ಠಾಣಾ ವ್ಯಾಪ್ತಿಯ ಆರ್‌ಬಿಐ ಲೇಔಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಆರ್‌ಬಿಐ ಲೇಔಟ್‌ನ ನಿವಾಸಿಗಳಿಗೆ ಬುಧವಾರ ರಾತ್ರಿ ಎರಡು ಕಟ್ಟಡಗಳ ಸಂದಿಯಿಂದ ಸಣ್ಣ ಮಗುವೊಂದು ಅಳುವ ಸದ್ದು ಕೇಳಿಸಿತ್ತು. ಈ ಬಗ್ಗೆ ಅಲ್ಲಿನವರು ಅನುಮಾನಗೊಂಡು ಪರಿಶೀಲಿಸಿದಾಗ ಎಲ್ಲೂ ಮಗು ಪತ್ತೆಯಾಗಿರಲಿಲ್ಲ. ಬಳಿಕ ಮರುದಿನ ಬೆಳಗ್ಗೆ ಕಟ್ಟಡದ ಸಂದಿಯಲ್ಲಿ ಸ್ಥಳೀಯರಿಗೆ ಹಸುಗೂಸು ಕಂಡು ಬಂದಿತ್ತು. ಕೂಡಲೇ ಅದನ್ನು ರಕ್ಷಿಸಿ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಿಸಲಾಯಿತು.ಈ ಸಂದರ್ಭ ಪವಾಡ ಸದೃಶ ಮಗು ಬದುಕುಳಿದಿದ್ದು, ಮಗುವಿನ ತಲೆ ಮತ್ತು ಮೈಯ ಕೆಲವು ಭಾಗಗಳಲ್ಲಿ ಇಲಿಗಳು ಕಚ್ಚಿದ್ದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಘಟನೆ ಸಂಬಂಧ ತಿಲಕ ನಗರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದು ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವೇ ಅಥವಾ ಯಾರಾದರೂ ಮಗು ಬೇಡ ಎಂದೇ ಎಸೆದು ಹೋದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಭಾಗದ ಸಿಸಿ ಕ್ಯಾಮರಾ ಪರಿಶೀಲಿಸಲಾಗುತ್ತಿದೆ. ಈ ಕಟ್ಟಡಗಳಲ್ಲಿದ್ದ ಇಲಿಗಳು ಮಗುವಿಗೆ ಕಚ್ಚಿ ಗಾಯಗೊಳಿಸಿವೆ. ರಾತ್ರಿ ಇಲಿ, ಹೆಗ್ಗಣಗಳ ಕಡಿತದಿಂದ ಮಗು ಅತ್ತಿರಬಹುದು. ಮಗು ಪ್ರಾಣ ಉಳಿದಿರುವುದೇ ಅಚ್ಚರಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

See also  ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ..! ನಿಗೂಢ ಸಾವಿಗೆ ಕಾರಣವೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget