ಕ್ರೈಂವೈರಲ್ ನ್ಯೂಸ್ಸಿನಿಮಾ

ಬಳ್ಳಾರಿ ಜೈಲಲ್ಲಿ ಟಿವಿಗಾಗಿ ಮೇಲಾಧಿಕಾರಿಗಳಿಗೆ ಮನವಿ ಮಾಡಿದ ದರ್ಶನ್..! ಚಾರ್ಜ್ ಶೀಟ್ ಸಲ್ಲಿಕೆಯ ಬಗ್ಗೆ ಮಾಹಿತಿ ಕೇಳಿದ ನಟ

ನ್ಯೂಸ್‌ ನಾಟೌಟ್‌: ಬಳ್ಳಾರಿ ಜೈಲಿನಲ್ಲಿ ಟಿವಿ ಬೇಕು ಎಂದು ದರ್ಶನ್ ಜೈಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ಟಿವಿ ಬೇಡ ಎನ್ನುತ್ತಿದ್ದ ಆರೋಪಿ ದರ್ಶನ್‌ಗೆ ಈಗ ಟಿವಿ ಬೇಕು ಎಂದಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ದರ್ಶನ್ ಟಿವಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಇಂದು(ಸೆ.3) ಬೆಳಗ್ಗೆ ದರ್ಶನ್‌ನನ್ನು ಇರಿಸಿರುವ ಹೈ ಸೆಕ್ಯೂರಿಟಿ ಸೆಲ್ ಬಳಿ ಸಿಬ್ಬಂದಿ ತಿಂಡಿ ಕೊಡಲು ಹೋಗಿದ್ದಾಗ ಚಾರ್ಜ್ ಶೀಟ್ ಸಲ್ಲಿಕೆ ವಿಚಾರದ ಬಗ್ಗೆ ದರ್ಶನ್ ಪದೇ ಪದೇ ಕೇಳಿದ್ದಾರೆ ಎನ್ನಲಾಗಿದೆ. ಮಾಹಿತಿ ಸಿಗದೇ ಇದ್ದಾಗ ಜೈಲು ಸಿಬ್ಬಂದಿ ಬಳಿ ಮಧ್ಯಾಹ್ನದ ಊಟ ಕೊಡಲು ಹೋದಾಗ ಟಿವಿ ಬಗ್ಗೆ ವಿಚಾರಿಸಿದ್ದಾರೆ. ಆಗ ಟಿವಿ ಬೇಕು ಅನ್ನುವುದಾದರೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎಂದು ಸಿಬ್ಬಂದಿ ಹೇಳಿದರು. ಹೀಗಾಗಿ ಟಿವಿ ಬೇಕು ಎಂದು ದರ್ಶನ್ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೈಲಿನ ಮ್ಯಾನುವಲ್ ಪ್ರಕಾರ ಕೈದಿಗಳಿಗೆ ಟಿವಿ ಕೊಡುವುದಕ್ಕೆ ಅವಕಾಶ ಇದೆ. ಸದ್ಯ ದರ್ಶನ್ ಸೆಲ್‌ನಲ್ಲಿ ಟಿವಿ ಇಲ್ಲ ಎಂದು ವರದಿ ತಿಳಿಸಿದೆ.

Click

https://newsnotout.com/2024/09/cow-transfer-kannada-news-puc-student-noomore-by-fire/
https://newsnotout.com/2024/09/helicopter-emergency-landing-in-sea-ship-and-airplane/
https://newsnotout.com/2024/09/devi-chamundeshwari-kannada-news-k-news-siddaramayya/

Related posts

ಫೊಟೋಗೆ ನಗುತ್ತಲೇ ಫೋಸ್ ಕೊಟ್ಟ ವಧು ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದಿದ್ದೇಕೆ? ಅದ್ಧೂರಿ ಮದುವೆಯಲ್ಲಿ ಏನಿದು ಸಿನಿಮೀಯ ಟ್ವಿಸ್ಟ್?

ಅಪ್ಪ-ಅಮ್ಮನ ಮೇಲಿನ ಕೋಪಕ್ಕೆ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ ಬಾಲಕಿಯರು!ಹೈಸ್ಕೂಲ್ ಹುಡುಗಿಯರ ಕೆಲಸಕ್ಕೆ ಪೋಷಕರ ಪರದಾಟ.!

ಸಂಪಾಜೆ ದರೋಡೆ ಪ್ರಕರಣ: ಮನೆಗೆ ನುಗ್ಗಿದ ಕಳ್ಳರು ಮೊದಲು ಮಾಡಿದ್ದು ಈ ಕೆಲಸ..!