ವೈರಲ್ ನ್ಯೂಸ್

ಬಾಲ ರಾಮನ ಕಣ್ಣನ್ನು ಕೆತ್ತಿದ್ದ ಚಿನ್ನದ ಉಳಿ, ಬೆಳ್ಳಿಯ ಸುತ್ತಿಗೆ ಇಲ್ಲಿದೆ ನೋಡಿ, ಈ ಬಗ್ಗೆ ಅರುಣ್‌ ಯೋಗಿರಾಜ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡದ್ದೇನು..?

166

ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ (Ayodhya) ಬಾಲ ರಾಮನ ಕಣ್ಣನ್ನು ಕೆತ್ತಲು ಬಳಸಿದ ಚಿನ್ನದ ಉಳಿ (Golden Chisel) ಮತ್ತು ಬೆಳ್ಳಿಯ ಸುತ್ತಿಗೆಯನ್ನು (Silver Hammer) ಅರುಣ್‌ ಯೋಗಿರಾಜ್‌ (Arun Yogiraj) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನೇತ್ರೋನ್ಮಿಲನ ಮಾಡಲೆಂದೇ ಒಂದು ಮುಹೂರ್ತ ನೀಡಿದ್ದರು. ಆ ಮುಹೂರ್ತದಲ್ಲೇ ಬೆಳ್ಳಿಯ ಸುತ್ತಿಗೆ ಮತ್ತು ಚಿನ್ನದ ಉಳಿಯನ್ನು ಬಳಸಿ ಕಣ್ಣನ್ನು ಕೆತ್ತಲಾಗಿತ್ತು. ರಾಮ ದೇಹವನ್ನು ಎಲ್ಲಾ ಕೆತ್ತಿದ್ದರೂ ಕಣ್ಣು ಕೆತ್ತಲು ಬಹಳ ಭಯವಾಗಿತ್ತು.

ಯಾಕೆಂದರೆ ಮಗುವಿನ ಕಣ್ಣು ಕೆತ್ತುವುದು ಬಹಳ ಸವಾಲಾಗಿತ್ತು. ಮೈಸೂರಿನಲ್ಲಿ ನಡೆದ ಚಿಣ್ಣರ ಮೇಳದಲ್ಲಿ ಬಹಳಷ್ಟು ಸಮಯ ಕಳೆದಿದ್ದೆ. ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಪುಟಾಣಿ ಮಕ್ಕಳು ಕೃಷ್ಣ ವೇಷ ಧರಿಸಿದ ಫೋಟೋ ನೋಡಿ ನನಗೆ ಒಂದು ಕಲ್ಪನೆ ಬಂತು. ಈ ಕಲ್ಪನೆಯನ್ನು ಆಧಾರಿಸಿ ನಾನು ಮುಖ, ಕಣ್ಣನ್ನು ಕೆತ್ತಿದೆ ಎಂದು ತಿಳಿಸಿದ್ದಾರೆ.

ಅರುಣ್‌ ಯೋಗಿರಾಜ್‌ ಟ್ವಿಟ್ಟರ್ ಎಕ್ಸ್‌ನಲ್ಲಿ, “ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿಯನ್ನು ಹಂಚಿಕೊಳ್ಳಲು ನಾನು ಯೋಚಿಸಿದೆ. ಇದರಲ್ಲಿ ನಾನು ರಾಮ ಲಲ್ಲಾನ (Ram lalla) ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

https://newsnotout.com/2024/02/congress-guarantee-for-rikshaw-drivers/
See also  ಭಾರತದಿಂದ ಕತ್ತೆಗಳು ನಾಪತ್ತೆ ಆಗುವುದಕ್ಕೆ ಚೀನಾ ದೇಶವೇ ಕಾರಣ ಎಂಬ ರಹಸ್ಯ ಬಯಲು..! ನೇಪಾಳದ ಮೂಲಕ ಕಳ್ಳಸಾಗಾಣೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget