ಕ್ರೈಂವೈರಲ್ ನ್ಯೂಸ್

ಮಗುವಿಗೆ ಹೆಸರಿಡಲು ದಂಪತಿ ನಡುವೆ ಜಗಳ..! ಕೋರ್ಟ್​ ಮೆಟ್ಟಿಲೇರಿದ ಪ್ರಕರಣ..! ನ್ಯಾಯಾಧೀಶರು ಪ್ರಕರಣ ಇತ್ಯರ್ಥ ಮಾಡಿದ್ದೇಗೆ..?

175

ನ್ಯೂಸ್ ನಾಟೌಟ್: ಇತ್ತೀಚೆಗೆ ಪೋಷಕರು ಮಗು ಹುಟ್ಟುವುದಕ್ಕೂ ಮುಂಚೆಯೇ ಮಗುವಿಗೆ ಏನು ಹೆಸರಿಡಬೇಕೆಂದು ಯೋಚಿಸುತ್ತಾರೆ. ಕೆಲವೊಮ್ಮೆ ಮಗುವಿಗೆ ಯಾವ ಹೆಸರಿಡುವುದು ಎನ್ನುವ ಕಾರಣಕ್ಕೆ ಎಷ್ಟೋ ದಂಪತಿಗಳ ನಡುವೆ ಜಗಳಗಳು ಆಗುತ್ತದೆ. ಇದೇ ರೀತಿಯ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಮಗುವಿನ ಹೆಸರಿಡಲು ಮುಂದಾಗ ದಂಪತಿಗಳ ನಡುವೆ ಮನಸ್ತಾಪ ಮೂಡಿದ್ದು, ಈ ಜಗಳ ಜೋರಾಗಿ ಪತ್ನಿಯೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

2021 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನ ದಂಪತಿಗಳಿಗೆ ಮಗು ಜನಿಸಿತು. ಆದರೆ ಮಗುವಿನ ಜನಿಸಿದ ಬಳಿಕ ಈ ದಂಪತಿಗಳ ನಡುವೆ ಮಗುವಿನ ಹೆಸರಿನ ಆಯ್ಕೆಯ ವಿಚಾರವಾಗಿ ಜಗಳವಾಗಿತ್ತು. ತಾಯಿ ಮಗುವನ್ನು ‘ಆದಿ’ ಎಂದು ಹೆಸರಿಡಲು ಬಯಸಿದರೆ, ತಂದೆಯೂ ‘ಶನಿ’ ಹೆಸರನ್ನು ಇಡಲು ಇಚ್ಛಿಸಿದ್ದರು. ಆದರೆ ದಂಪತಿಗಳಿಬ್ಬರಿಗೂ ಗಂಡು ಮಗುವಿಗೆ ನಾಮಕರಣ ಮಾಡಲು ಒಮ್ಮತದ ಅಭಿಪ್ರಾಯವು ಮೂಡಿರಲಿಲ್ಲ. ಇದರಿಂದಾಗಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದು, ಒಂದೂವರೆ ವರ್ಷದಿಂದ ತವರು ಮನೆಯಲ್ಲೇ ಉಳಿದಿದ್ದರು. ಅದಲ್ಲದೇ, ಸಿಆರ್ ಪಿಸಿ ಯ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಿ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಧೀಶರು ನೀಡಿದ ಸಲಹೆಗಳನ್ನೂ ಮಹಿಳೆಯೂ ತಿರಸ್ಕರಿಸಿದ್ದಾರೆ.

ಆದರೆ, ಮೈಸೂರು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಮಗುವನ್ನು ಪೋಷಕರೊಂದಿಗೆ ಕರೆಸಿ, ಮೂರು ವರ್ಷದ ಮಗುವಿಗೆ ಆರ್ಯವರ್ಧನ್ ಎಂದು ಹೆಸರಿಡಲು ಸೂಚಿಸುವ ಮೂಲಕ ಹುಣಸೂರಿನ 8ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಈ ತೀರ್ಪನ್ನು ದಂಪತಿ ಒಪ್ಪಿಕೊಂಡಿದ್ದಾರೆ. ಹೌದು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ, 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೋವಿಂದಯ್ಯ ಅವರು, ಮಗುವಿಗೆ ಹೆಸರಿಡುವುದರಲ್ಲಿ ಏನಿದೆ? ಮಗುವಿಗೆ ಉತ್ತಮ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ಕೊಡಿಸಿ ಎಂದು ದಂಪತಿಗಳಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ.

ಅದಲ್ಲದೇ, ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೌಮ್ಯ ಅವರು ಮಗುವಿಗೆ ಆರ್ಯವರ್ಧನ್ ಹೆಸರಿಡಲು ಸೂಚಿಸಿದ್ದಾರೆ. ಕೊನೆಗೆ ನ್ಯಾಯಾಧೀಶ ಗೋವಿಂದಯ್ಯ ಅವರು ದಂಪತಿಗಳಿಬ್ಬರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಗುವಿಗೆ ಅದೇ ಹೆಸರನ್ನು ಇಡಿ ಎಂದು ಹೇಳಿ ಮಗುವಿಗೆ ಸಿಹಿಯನ್ನು ತಿನ್ನಿಸಿದ್ದಾರೆ. ನ್ಯಾಯಾಧೀಶರ ಮಾತಿಗೆ ದಂಪತಿಗಳು ಒಪ್ಪಿಗೆ ಸೂಚಿಸುವ ಮೂಲಕ ಈ ಪ್ರಕರಣವು ಇತ್ಯರ್ಥವಾಗಿದೆ.

Click

https://newsnotout.com/2024/12/takeoff-airplane-airhostelss-viral-news/
https://newsnotout.com/2024/12/kasaragodu-kannada-news-5-shops-are-under-fire-hd/
https://newsnotout.com/2024/12/udupi-kannada-news-tourist-boat-sink-boat-rider-suspence/
https://newsnotout.com/2024/12/viratkohli-restorant-in-bengaluru-cricketer-bbmp-notice/
https://newsnotout.com/2024/12/ticjet-dog-kannada-news-betting-issue-police-arrested-d/
See also  ಪ್ರೇಮಿಗಳನ್ನು ಕೊಂದು ಹೆತ್ತವರೇ ಮೊಸಳೆ ಬಾಯಿಗೆ ಹಾಕಿದ್ರಾ? ಏನಿದು ಅಮಾನವೀಯ ಮರ್ಯಾದಾ ಹತ್ಯೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget