ಬೆಂಗಳೂರುರಾಜಕೀಯ

ಶಿಕಾರಿಪುರ: ಬಿ.ವೈ. ವಿಜಯೇಂದ್ರ ಉಮೇದುವಾರಿಕೆ ಸಲ್ಲಿಕೆ, ಅದ್ಧೂರಿ ಮೆರವಣಿಗೆ

238

ನ್ಯೂಸ್‌ ನಾಟೌಟ್‌: ಶಿವಮೊಗ್ಗದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಧಾನಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದು, ಈ ನಿಟ್ಟಿನಲ್ಲಿ ಬುಧವಾರ ಅದ್ಧೂರಿಯಾಗಿ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.

ಇಷ್ಟು ವರ್ಷ ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪರ್ಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುತ್ತಿದ್ದಾರೆ. ಇದಕ್ಕಾಗಿ ಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬುಧವಾರ ಭರ್ಜರಿ ಬಲಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದರು.

ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ವಿಜಯೇಂದ್ರ ಅವರು ಮನೆ ದೇವರಿಗೆ ಪತ್ನಿ ಪ್ರೇಮಾ ಜತೆ ಪೂಜೆ ಸಲ್ಲಿಸಿ ದೇವರ ಮನೆಯಲ್ಲಿ ಬಿಜೆಪಿ ಬಿ ಫಾರಂ ಇಟ್ಟು ಪ್ರಾರ್ಥಿಸಿದರು. ಬಳಿಕ ಕುಟುಂಬದ ಹೆಣ್ಣು ಮಕ್ಕಳೆಲ್ಲ ಸೇರಿ ವಿಜಯೇಂದ್ರ ಅವರಿಗೆ ಆರತಿ ಎತ್ತಿ ಶುಭ ಕೋರಿದರು. ನಾಮಪತ್ರ ಸಲ್ಲಿಕೆಗೆ ಮನೆಯಿಂದ ಹೊರಡುವ ಮೊದಲು ತಂದೆ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಅಲ್ಲಿಂದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಘವೇಂದ್ರ ಮಠಕ್ಕೆ ಆಗಮಿಸಿದರು. ವಿಜಯೇಂದ್ರ ಅವರಿಗೆ ಪತ್ನಿ ಪ್ರೇಮಾ, ತಂದೆ ಬಿ.ಎಸ್. ಯಡಿಯೂರಪ್ಪ ಸಹೋದರ ಬಿ.ವೈ. ರಾಘವೇಂದ್ರ, ನಟಿ ಶೃತಿ, ಶಾಸಕ ಪಿ ರಾಜೀವ್, ಸಚಿವ ಎಂಟಿಬಿ ನಾಗರಾಜ್, ಕೇಂದ್ರ ಸಚಿವ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್‌. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮೊದಲಾದವರು ಭಾಗಿಯಾಗಿದ್ದರು.

See also  ರಾತ್ರಿ ಊಟ ಮಾಡಿ ಮಲಗಿದ ನಾಲ್ವರು ಮೇಲೇಳಲಿಲ್ಲ..! ಕೆಲಸಕ್ಕಾಗಿ ದೂರದೂರಿನಿಂದ ಬಂದವರ ನಿಗೂಢ ಅಂತ್ಯಕ್ಕೆ ಕಾರಣವೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget