ಕ್ರೈಂ

ಎಟಿಎಮ್ ಗೆ ಕನ್ನ ಹಾಕಲೆತ್ನಿಸಿ ಕಂಬಿ ಎಣಿಸಿದ ಕಳ್ಳ..!

530

ಮಂಗಳೂರು: ಎಟಿಎಮ್ ಒಡೆದು ಕಳವುಗೈಯ್ಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು ಕೊಪ್ಪಳ ಮೂಲದ ಬಾಚನಳ್ಳಿ ನಿವಾಸಿ ಬೀರಪ್ಪ ಎಂದು ಗುರುತಿಸಲಾಗಿದೆ.

ಏನಿದು ಘಟನೆ?

ಕಳೆದ ರಾತ್ರಿ 2 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ತೊಕ್ಕೊಟ್ಟಿನಲ್ಲಿರುವ ಬ್ಯಾಂಕ್ ಆಫ್ ಬರೋಡ ಎಟಿಎಮ್ ಗೆ ಬಂದಿದ್ದು, ಎಟಿಎಮ್ ಒಡೆಯಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಬ್ಯಾಂಕ್ ನ ಕಣ್ಗಾವಲು ಪಡೆಯ ಅಧಿಕಾರಿಗಳು ಚುರುಕಾಗಿದ್ದು, ಪೋಲಿಸರಿಗೆ ಸುದ್ದಿ ನೀಡಿದ್ದಾರೆ. ಕೂಡಲೇ ಪೋಲಿಸರು ಸ್ಥಳಕ್ಕೆ ಆಗಮಿಸಿ ಆಗಂತುಕನನ್ನು ಬಂಧಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಎಟಿಎಮ್ ಒಡೆಯಲು ಯತ್ನಿಸುವ ವೇಳೆಯೇ ಆತನನ್ನು ಬಂಧಿಸಿದ್ದರಿಂದ ಯಾವುದೇ ಹಣ ಕಳವಾಗಿಲ್ಲ, ವಿಚಾರಣೆ ನಡೆಯುತ್ತಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

See also  ಮೂವರು ಇಂಜಿನೀಯರ್ ವಿದ್ಯಾರ್ಥಿಗಳು ನೀರು ಪಾಲು
  Ad Widget   Ad Widget     Ad Widget   Ad Widget   Ad Widget   Ad Widget