ಕರಾವಳಿ

8ನೇ ಸಲ ಏಷ್ಯಾ ಕಪ್ ಗೆದ್ದ ಭಾರತ, ಲಂಕಾಗೆ 10 ವಿಕೆಟ್‌ ಗಳ ಹೀನಾಯ ಸೋಲು

ನ್ಯೂಸ್ ನಾಟೌಟ್: ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಅಬ್ಬರಿಸಿದ್ದಾರೆ. ಪರಿಣಾಮ ಶ್ರೀಲಂಕಾ ವಿರುದ್ಧ ಭಾರತೀಯರು ಭರ್ಜರಿ 10 ವಿಕೆಟ್‌ ಗಳ ಗೆಲುವು ಸಾಧಿಸಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆತಿಥೇಯ ಶ್ರೀಲಂಕಾ ತಂಡ ಕೇವಲ 50 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಅಲ್ಪ ಗುರಿ ಬೆನ್ನಟ್ಟಿದ ಭಾರತ ಇಶಾನ್ ಕಿಶಾನ್ (23* ರನ್‌) ಹಾಗೂ ಶುಭ್ ಮನ್ ಗಿಲ್ (27*ರನ್) ನೆರವಿನಿಂದ ಸುಲಭವಾಗಿ ಗೆಲುವಿನ ದಡ ಸೇರಿತು. ಭಾರತ 8ನೇ ಸಲ ಏಷ್ಯಾ ಕಪ್ ಗೆದ್ದ ಸಾಧನೆ ಮಾಡಿತು.

ಇದಕ್ಕೂ ಮೊದಲು ಭಾರತ ತಂಡದ ಪರವಾಗಿ ಮೊಹಮ್ಮದ್ ಸಿರಾಜ್​ ಜೀವನ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇವರ ಅಬ್ಬರಕ್ಕೆ ಶ್ರೀಲಂಕಾದ ಬ್ಯಾಟ್ಸ್ ಮನ್ ಗಳೆಲ್ಲರೂ ತರಗೆಲೆಯಂತೆ ಉದುರಿದರು. ಸಿರಾಜ್ ತಮ್ಮ 7 ಓವರ್​ಗಳ ಸ್ಪೆಲ್​ನಲ್ಲಿ 21 ರನ್​ ನೀಡಿ 6 ವಿಕೆಟ್​ ಕಬಳಿಸಿದ್ದಾರೆ. ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಮ್ಮ 2.2 ಓವರ್​ಗಳ 3 ರನ್​ ಬಾರಿಸಿ 3 ವಿಕೆಟ್ ಪಡೆದರು.

Related posts

ಪುತ್ತೂರಿನ ವಿವಾಹಿತ ಮಹಿಳೆ ಅನ್ಯಕೋಮಿನ ಯುವಕನೊಂದಿಗೆ ಪರಾರಿ, ಇದು ‘ಲವ್ ಜಿಹಾದ್ ಪ್ರಕರಣ’ ಮಹಿಳೆಯ ಪತಿ ಆರೋಪ

ಮಡಿಕೇರಿ: ದರ್ಶನ್ ಸುಳ್ಯ ಜಿಲ್ಲಾ ಪಂಚಾಯತ್ ಲೆಕ್ಕ ಸಹಾಯಕರಾಗಿ ನೇಮಕ, ‘ರವಿಕೆ ಪ್ರಸಂಗ’ ಸಿನಿಮಾದಲ್ಲಿ ನಟಿಸಿದ್ದ ಯುವಕ

ಕ್ರಿಕೆಟ್ ವಿಶ್ವಕಪ್ ಕಿರೀಟ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಭಾರತದವರು..!ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ದ.ಕ. ಜಿಲ್ಲೆಯ ಕಿನ್ನಿಗೋಳಿ ಮೂಲದ ಯುವತಿಯ ಸ್ಫೂರ್ತಿ ಕಥೆ ಇಲ್ಲಿದೆ ಓದಿ…