ಕರಾವಳಿರಾಜಕೀಯ

ಶ್ರೀ ಮಹಿಷ ಮರ್ಧಿನಿಗೆ ವಜ್ರದ ಸರ ಅರ್ಪಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ, ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರ ಕುಟುಂಬಸ್ಥರು, ಅಭಿಮಾನಿಗಳು ಭಾಗಿ

150

ನ್ಯೂಸ್ ನಾಟೌಟ್: ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ನವರಾತ್ರಿ ಪ್ರಯುಕ್ತ ಕೋಡಿಂಬಾಡಿ ಶ್ರೀ ಮಹಿಷ ಮರ್ಧಿನಿ ದೇವಿಗೆ ವಜ್ರದ ಸರವನ್ನು ಅರ್ಪಿಸಿದರು.

ಬಳಿಕ ಚಂಡಿಕಾ ಹೋಮ ಮತ್ತು ತುಲಾಭಾರ ಸೇವೆ ಸಲ್ಲಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರ ಕುಟುಂಬಸ್ಥರು, ಗ್ರಾಮಸ್ಥರು, ಅಶೋಕ್ ಕುಮಾರ್ ರೈ ಅವರ ಅಭಿಮಾನಿಗಳು ಭಾಗವಹಿಸಿದ್ದರು.

ಸೇವಾ ರೂಪದಲ್ಲಿ ತನ್ನ ಹುಟ್ಟೂರ ಆರಾಧ್ಯ ದೇವರಾದ ಮಹಿಷ‌ಮರ್ಧಿನಿಗೆ ವಜ್ರದ ಸರ ಸಮರ್ಪಿಸಿದ್ದು ವಿಶೇಷವಾಗಿತ್ತು. ಪೂಜೆಯ ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಿತು.

See also  ‘ದೊಡ್ಡವರೆಲ್ಲ ಜಾಣರಲ್ಲ...ಚಿಕ್ಕವರೆಲ್ಲ ಕೋಣರಲ್ಲ’, ಮಕ್ಕಳಿಂದ ಕಲಿಯಿರಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget