ಬೆಂಗಳೂರು

ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದ್ದಕ್ಕೆ ಜಗಳ!ಅಕ್ಕನನ್ನೇ ಕೊಲೆ ಮಾಡಿದ ತಂಗಿ..!

158

ನ್ಯೂಸ್‌ ನಾಟೌಟ್‌ :ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದಳೆಂಬ ಕಾರಣಕ್ಕೆ ತಂಗಿಯೇ ಅಕ್ಕನನ್ನು ಕೊಲೆ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ.ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಗುಡಿಯಾ ದೇವಿ ( 29) ಕೊಲೆಯಾದವರು.

ತಂಗಿ ಗೀತಾಕುಮಾರಿ ಹಾಗೂ ಗೆಳೆಯ ರಾಜೇಶ್‌ ಕುಮಾರ್‌ (29) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.ಭಾನುವಾರ ರಾತ್ರಿ 8.15 ರ ಸುಮಾರಿಗೆ ಗುಡಿಯಾದೇವಿ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದಕ್ಕೆ ತಂಗಿ ಗೀತಾ ಆಕ್ಷೇಪಿಸಿದ್ದರು.ಇದಕ್ಕೆ ಇಬ್ಬರ ನಡುವೆ ಜೋರು ಜಗಳ ನಡೆದಿತ್ತು.ಮನೆಯಲ್ಲಿಯೇ ಇದ್ದ ರಾಜೇಶ್‌, ಜಗಳ ಬಿಡಿಸಲು ಮುಂದಾಗಿದ್ದರು. ಆದರೆ, ಮಾತು ಕೇಳದ ಗುಡಿಯಾ ಮೇಲೆ ಹಲ್ಲೆನಡೆಸಿದ್ದ.ಕುಸಿದು ಬಿದ್ದ ಗುಡಿಯಾ ಅವರ ಕತ್ತನ್ನು ದೊಣ್ಣೆಯಿಂದ ಅದುಮಿಕೊಂಡಿದ್ದ. ಪರಿಣಾಮ ಉಸಿರುಗಟ್ಟಿ ಗುಡಿಯಾ ಮೃತಪಟ್ಟಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ದರ್ಶನ್‌ ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ..? ಹೈಕೋರ್ಟ್‌ ಗೆ ವಕೀಲರಿಂದ ವರದಿ ಸಲ್ಲಿಕೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget