ಬೆಂಗಳೂರು

ಆರ್ಕಿಟೆಕ್ಟ್ ಕೆಲಸ ತೊರೆದು ವಡಾ ಪಾವ್ ಮಾರಾಟ ಮಾಡಿದ ಯುವಕ..!ಈ ನಿರ್ಧಾರಕ್ಕೆ ಬರಲು ಕಾರಣವೇನು?

ನ್ಯೂಸ್ ನಾಟೌಟ್ : ನಾಲ್ಕು ವರ್ಷಗಳ ಹಿಂದೆ ಅಬ್ಬರಿಸಿದ ಕೋರೋನಾಗೆ ಬಹುತೇಕ ಯುವಕರು ಕೃಷಿ ಹಾದಿಯನ್ನು ಹಿಡಿದಿದ್ದರು.ಕೈ ತುಂಬಾ ಸಂಬಳ ಎಣಿಸುತ್ತಿದ್ದ ಇಂಜೀನಿಯರ್ಸ್‌ ಕೂಡ ಹಳ್ಳಿಯತ್ತ ಮರಳಿ ತಮ್ಮೂರಿನಲ್ಲಿ ಚಂದದ ಭವಿಷ್ಯವನ್ನು ರೂಪಿಸಿಕೊಂಡಿದ್ದರು.ಇದೀಗ ಬೆಂಗಳೂರಿನಲ್ಲಿ ತಮ್ಮ ಕೆಲಸಕ್ಕೆ ಡಿಮ್ಯಾಂಡ್‌ ಇದ್ದರೂ ಕೂಡ ಆರ್ಕಿಟೆಕ್ಟ್​ (ವಾಸ್ತುಶಿಲ್ಪಿ) ಕೆಲಸವನ್ನು ತೊರೆದು ವಡಾ-ಪಾವ್​ ಮಾರಾಟ ಮಾಡುತ್ತಿದ್ದಾರೆ ಇಲ್ಲೊಬ್ಬರು ವ್ಯಕ್ತಿ.ಈ ನೈಜ ಕಥೆಯನ್ನು ಸೋಷಿಯಲ್​ ಮೀಡಿಯಾ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಸೋಷಿಯಲ್​ ಮೀಡಿಯಾ ಬಳಕೆದಾರ ವಿಶ್ವಾಸ್ ಎಂಬುವರು ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್​ ಆಗಿದೆ.“ನಾನು ಸೂಪರ್‌ ಹೀರೋ ಅಲ್ಲ, ಆದರೆ ನಾನು ವಡಾ ಪಾವ್‌ನೊಂದಿಗೆ ದಿನವನ್ನು ಉಳಿಸಬಲ್ಲೆ” (“I’m not a superhero, but I can save the day with a vada pav”) ಎಂಬ ಫಲಕವನ್ನು ಹಿಡಿದಿರುವ ವ್ಯಕ್ತಿಯೊಬ್ಬರ ಜತೆಗೆ ಇರುವ ಚಿತ್ರವನ್ನು ವಿಶ್ವಾಸ್​ ಹಂಚಿಕೊಂಡಿದ್ದಾರೆ. ಕೆಲವು ಪ್ಯಾಕ್ ಮಾಡಿದ ಆಹಾರ ಪೊಟ್ಟಣಗಳನ್ನು ಟೂ ವ್ಹೀಲರ್​ನಲ್ಲಿ ಇಟ್ಟಿರುವುದು ಕೂಡ ಈ ಚಿತ್ರದಲ್ಲಿ ಕಂಡುಬರುತ್ತದೆ.

“ಜುಡಿಯೋ, HSR ನಲ್ಲಿ ಈ ವ್ಯಕ್ತಿಯನ್ನು ಭೇಟಿಯಾದೆ. ಶಾಪಿಂಗ್ ಮತ್ತು ವಡಾ-ಪಾವ್ ಆನಂದದ ಮಿಶ್ರಣದಿಂದ ಮಾಡಿದ ದಿನ ಇದಾಗಿತ್ತು. ಮಾಜಿ ವಾಸ್ತುಶಿಲ್ಪಿಯೊಬ್ಬರು ವಡಾ ಪಾವ್‌ನ ಸಂಪೂರ್ಣ ಊಟದ ಮೋಡಿಯನ್ನು ಪುನರುಜ್ಜೀವನಗೊಳಿಸಲು ಕಾರ್ಪೊರೇಟ್ ಜಗತ್ತನ್ನು ತೊರೆದಿದ್ದಾರೆ” ಎಂದು ಅವರು ಪೋಸ್ಟ್​ನಲ್ಲಿ ಬರೆದಿದ್ದಾರೆ.“ಪ್ರತಿಯೊಬ್ಬರೂ ಉದ್ಯಮಿಯಾಗಬಹುದು!! ಪ್ರತಿಯೊಬ್ಬರೂ ಮಾಡಲು ಹಲವು ಆಲೋಚನೆಗಳನ್ನು ಹೊಂದಿರುತ್ತಾರೆ, ಆದರೆ ಪ್ರತಿಯೊಬ್ಬರೂ ಅದನ್ನು ಪ್ರಾರಂಭಿಸುವುದಿಲ್ಲ. ಸ್ವಲ್ಪವೂ ಪ್ರಗತಿಯನ್ನು ಸಾಧಿಸುವುದಿಲ್ಲ.” ಎಂದು ಇನ್ನೊಬ್ಬ ಇಂಟರ್​ನೆಟ್​ ಬಳಕೆದಾದರರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

Related posts

ಸಚಿವ ಮಧು ಬಂಗಾರಪ್ಪಗೆ (Madhu bangarappa)ಅಧಿಕಾರದ ಪಿತ್ತ ನೆತ್ತಿಗೇರಿದೆ..! ಸ್ವಪಕ್ಷದ ಸಚಿವರೇ ವಿರುದ್ಧವೇ ಶಾಸಕ ಬೇಳೂರು ಗೋಪಾಲಕೃಷ್ಣ ಗರಂ ಆದದ್ದು ಯಾಕೆ..?

ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಬಂದ ರಾಹುಲ್ ಗಾಂಧಿ..! ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

ಕೋರ್ಟ್ ಆವರಣದಲ್ಲೇ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ..! ತಾನೇ ಹೋಗಿ ಪೊಲೀಸರಿಗೆ ಶರಣಾದ ಆರೋಪಿ..!