ಸುಳ್ಯ

ಅರಂತೋಡು: ತರಬೇತಿ ಕಾರ್ಯಾಗಾರದ ಕುರಿತು ಪೂರ್ವಭಾವಿ ಸಭೆ, ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ, ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಪದಾಧಿಕಾರಿಗಳು ಭಾಗಿ

154

ನ್ಯೂಸ್ ನಾಟೌಟ್: ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ವತಿಯಿಂದ ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಆಶ್ರಯದಲ್ಲಿ (ಡಿ17) ಮುಂಬರುವ ಭಾನುವಾರ ಯುವಕ-ಯುವತಿ ಮಂಡಲಗಳ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಲಿದೆ. ಈ ತರಬೇತಿ ಕಾರ್ಯಗಾರದಲ್ಲಿ ಸಂಪಾಜೆ, ಅರಂತೋಡು, ಮರ್ಕಂಜ ಗ್ರಾಮ ವ್ಯಾಪ್ತಿಯಲ್ಲಿರುವ ಯುವಕ-ಯುವತಿಯರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ, ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಪದಾಧಿಕಾರಿಗಳು ಡಿ10ರಂದು ಅರಂತೋಡಿನ ಸಿರಿಸೌಧ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಸುಬ್ರಮಣಿ ಪಿ.ವಿ ಹಾಗೂ ಲೋಹಿತ್ ಬಾಳಿಕಳ ಕಾರ್ಯಗಾರದ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಕೇಶವ ಅಡ್ತಲೆ , ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರುಪಣೆ ಹಾಗೂ ಅರಂತೋಡು ವ್ಯಾಪ್ತಿಯ ಎಲ್ಲಾ ಯುವಕ ಮಂಡಲಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ವಿನಯ್ ಬೆದ್ರುಪಣೆ ಸ್ವಾಗತಿಸಿದರು. ರಂಜಿತ್ ಅಡ್ತಲೆ ವಂದಿಸಿದರು.

See also  ಸುಳ್ಯ: ಒಂದು ಕಡೆ ಮಳೆ, ಮತ್ತೊಂದು ಕಡೆ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget