ಕರಾವಳಿಬೆಂಗಳೂರು

ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ: ಬ್ಯಾನೆಟ್ ಮೇಲೆ ವ್ಯಕ್ತಿ ಬಿದ್ದರೂ ೨ ಕಿ.ಮೀ ದೂರ ಕೊಂಡೊಯ್ದ ಲೇಡಿ ಡ್ರೈವರ್

315

ನ್ಯೂಸ್ ನಾಟೌಟ್ : ಸಿಲಿಕಾನ್ ಸಿಟಿ ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸ್ಕೂಟರ್ ಸವಾರನೊಬ್ಬ ವಯಸ್ಸಾದ ವ್ಯಕ್ತಿಯನ್ನು ಸುಮಾರು ಒಂದು ಕಿ.ಮೀ ದೂರ ಎಳೆದೊಯ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು  ಅಮಾನವೀಯ  ಘಟನೆ ಬೆಳಕಿಗೆ ಬಂದಿದೆ.ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆಂಡ್ ರನ್ ಪ್ರಕರಣ ಆಗಿರುವುದರ ಬಗ್ಗೆ ವರದಿಯಾಗಿದೆ.

ಮತ್ತೊಂದು ಅಮಾನವೀಯ ಘಟನೆ:

ಇದೊಂದು ಭಯಾನಕ ದೃಶ್ಯವಾಗಿದ್ದು,ಬೆಂಗಳೂರಿನ ಉಳ್ಳಾಲ ರಸ್ತೆಯ ಸಿಗ್ನಲ್ ನಲ್ಲಿ  ನಡೆದಿದೆ. ಕಾರ್ ಗೆ ಡಿಕ್ಕಿ ಹೊಡೆದ್ರೂ ಲೇಡಿ ಡ್ರೈವರ್ ಡೋಂಟ್ ಕೇರ್ ಅನ್ನದೇ ಸುಮಾರು ಎರಡು ಕಿ.ಮೀ ದೂರ ಕೊಂಡೊಯ್ದ ಘಟನೆ ಇದಾಗಿದೆ. ಬ್ಯಾನೆಟ್ ಮೇಲೆ ವ್ಯಕ್ತಿ ಬಿದ್ದಿದ್ದು, ಲೇಡಿ ಡ್ರೈವರ್ ೨ ಕಿ.ಮೀ ದೂರ ಎಳೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.ಸ್ಥಳದಲ್ಲಿ ಜನ ಜಮಾಯಿಸಿ ಲೇಡಿ ಡ್ರೈವರ್ ಅನ್ನು ತರಾಟೆಗೆ ತೆಗೆದುಜಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

See also  ಕೊಡಗು: ಗಾಂಜಾ ಸರಬರಾಜು ಮಾಡುತ್ತಿದ್ದ ಬೆಡ್ ಶೀಟ್ ಮಾರಾಟಗಾರರು ಅರೆಸ್ಟ್..! ಖಾಸಗಿ ಬಸ್ ನಿಲ್ದಾಣದಲ್ಲಿ ಮಾರಾಟ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget