Latestಕರಾವಳಿದಕ್ಷಿಣ ಕನ್ನಡ

ಕಲ್ಲುಗುಂಡಿ:ಶ್ರೀ ಮುತ್ತು ಮಾರಿಯಮ್ಮ ದೇವಿಯ ಹಾಗೂ ಪರಿವಾರ ದೈವಗಳ ವಾರ್ಷಿಕ ಜಾತ್ರೋತ್ಸವ;ಎ.18ರಿಂದ ಎ.20ರವರೆಗೆ ವಿವಿಧ ಕಾರ್ಯಕ್ರಮ:ಇಲ್ಲಿದೆ ಮಾಹಿತಿ

534

ನ್ಯೂಸ್‌ ನಾಟೌಟ್: ಸುಳ್ಯ ಕಲ್ಲುಗುಂಡಿಯ ನೆಲ್ಲಿಕುಮೇರಿಯಲ್ಲಿರುವ ಶ್ರೀ ಮುತ್ತು ಮಾರಿಯಮ್ಮ ದೇವಿಯ ಹಾಗೂ ಪರಿವಾರ ದೈವಗಳ ವಾರ್ಷಿಕ ಜಾತ್ರೋತ್ಸವವು ಎ.18ರಿಂದ ಎ.20ರವರೆಗೆ ನಡೆಯಲಿದೆ.ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಯವರ ಶುಭಾರ್ಶೀವಾದದೊಂದಿಗೆ ಗಣಹೋಮ,ವಿವಿಧ ವೈಧಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಎ.11ಕ್ಕೆ 9 ಗಂಟೆಗೆ ಸರಿಯಾಗಿ ಗೊನೆ ಕಡಿಯುವ ಕಾರ್ಯಕ್ರಮವಿರಲಿದೆ.

ಈ ವೈಭವದ ಜಾತ್ರೋತ್ಸವದಲ್ಲಿ ಎಲ್ಲರೂ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಗೌರವಾಧ್ಯಕ್ಷ ಕೆ.ಜಿ.ರಾಜಾರಾಮ ಕೀಲಾರು, ಮೊಕ್ತೇಸರರಾದ ಶ್ರೀ ಎಸ್‌.ಪಳನಿವೇಲು,ಗೌರವ ಸಲಹೆಗಾರರಾದ ಬಿ.ಆರ್ ಪದ್ಮಯ್ಯ,ಅಧ್ಯಕ್ಷರಾದ ಜ್ಞಾನಶೀಲ ವಿ(ರಾಜು)ಗೌರವ ಸಲಹೆಗಾರ ಶಿವಲಿಂಗಮ್ ಎರುಕಡುಪು ಹಾಗೂ ಪ್ರಧಾನ ಅರ್ಚಕರಾದ ಸೂರ್ಯ ಪ್ರಸಾದ್ ಭಟ್‌ , ಪೂಜಾಕರ್ಮಿ ಸೆಲ್ವರಾಜ್ ಕೊಯನಾಡು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಆಡಳಿತ ಸಮಿತಿ , ಬ್ರಹ್ಮಕಲಶೋತ್ಸವ ಸಮಿತಿ, ನವರಾತ್ರಿ ಉತ್ಸವ ಸಮಿತಿ , ಶ್ರೀ ಮುತ್ತು ಮಾರಿಯಮ್ಮ ಸೇವಾ ಟ್ರಸ್ಟ್(ರಿ)ನೆಲ್ಲಿಕುಮೇರಿ ಫ್ರೆಂಡ್ಸ್ ಕ್ಲಬ್(ರಿ) ಹಾಗೂ ಊರ ಸಮಸ್ತ ಭಗವದ್ಭಕ್ತರು ವಿನಂತಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಾಗಮುತ್ತು (ಖಜಾಂಜಿ) 9632653201

ತ್ಯಾಗರಾಜ್ (ಕಾರ್ಯದರ್ಶಿ) 9900998047

ಪಿ.ವಿ.ಸುಬ್ರಮಣಿ (ಪ್ರ.ಕಾರ್ಯದರ್ಶಿ)ಶ್ರೀ ಮುತ್ತು ಮಾರಿಯಮ್ಮ ಸೇವಾ ಟ್ರಸ್ಟ್ (ರಿ)ನೆಲ್ಲಿಕುಮೇರಿ 9663660291 ಸಂಪರ್ಕಿಸಬಹುದು.

See also  ಮಗನ ವಿವಾಹಕ್ಕೆ ಚಪ್ಪರದ ಸಿದ್ಧತೆ ಮಾಡುತ್ತಲ್ಲೇ ಕುಸಿದು ಬಿದ್ದು ತಂದೆ ಸಾವು..! ಮದುವೆ ಮನೆಯಲ್ಲಿ ಸೂತಕದ ಛಾಯೆ..!
  Ad Widget   Ad Widget   Ad Widget   Ad Widget   Ad Widget   Ad Widget