ಕರಾವಳಿರಾಜಕೀಯ

ಸ್ವರ್ಣ ಕಾರ್ಕಳಕ್ಕೆ ಸರ್ವ ಋತುವಿನ ರಸ್ತೆಗಳ ಕೊಡುಗೆ, ನಗರ-ಗ್ರಾಮೀಣ ಪ್ರದೇಶಗಳ ಅಂತರ ತಗ್ಗಿದ್ದು ಹೇಗೆ ಗೊತ್ತಾ..?

220

ನ್ಯೂಸ್ ನಾಟೌಟ್: ಒಂದು ಊರಿನ ಅಭಿವೃದ್ಧಿಯನ್ನು ಮೊದಲು ನೋಡುವುದು ರಸ್ತೆಗಳ ಪ್ರಗತಿಯಿಂದ. ಮೂಲ ಸೌಕರ್ಯವಿಲ್ಲದ ಊರನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಕಾರ್ಕಳದ ವಿಚಾರದಲ್ಲಿ ಒಮ್ಮೆ ಬಂದವರು ಮತ್ತೊಮ್ಮೆ ಬರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ ಪ್ರಗತಿಯಾಗಿದೆ ಅನ್ನುವುದು ವಿಶೇಷ. ಇದಕ್ಕೆಲ್ಲ ಕಾರಣ ಶಾಸಕ ವಿ.ಸುನಿಲ್ ಕುಮಾರ್ ಅವರ ದೂರದೃಷ್ಟಿಯ ಯೋಜನೆಗಳು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಹೌದು, ಕಾರ್ಕಳದ ಜನತೆಗೆ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ ವಿ.ಸುನಿಲ್ ಕುಮಾರ್ ಅವರ ಪಾತ್ರ ಅತ್ಯಂತ ದೊಡ್ಡದು ಅನ್ನುವುದು ವಿಶೇಷ. ಇಲ್ಲಿನ ರಸ್ತೆಗಳು ಅಭಿವೃದ್ಧಿಯ ಸಂಕೇತ ತೋರಿಸುತ್ತವೆ. ಗ್ರಾಮೀಣ, ಪಟ್ಟಣ ಹಾಗೂ ಚತುಷ್ಪಥ ರಸ್ತೆಗಳ ಅಭಿವೃದ್ಧಿ ಕಾರ್ಕಳದಲ್ಲಿ ಶರವೇಗದಲ್ಲಿ ಸಾಗುತ್ತಿದೆ ಅನ್ನುವುದು ವಿಶೇಷ. ಪಟ್ಟಣದ ಜತೆಗೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಸ್ವರ್ಣ ಕಾರ್ಕಳದ ಸಂಪರ್ಕಕ್ಕೆ ಸರ್ವ ಋತು ರಸ್ತೆ ನಿರ್ಮಾಣವಾಗಿದೆ. ಕಾರ್ಕಳ ಪ್ರವೇಶಿಸುವ ಎಲ್ಲ ರಸ್ತೆಗಳು ಅದ್ಭುತ ಅಭಿವೃದ್ಧಿ ಕಂಡಿದೆ. ಈ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶದ ನಡುವಿನ ಅಂತರ ಸಾಕಷ್ಟು ತಗ್ಗಿದೆ.

See also  ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದು ಗಲೀಜು ಮಾಡಿದ ಶಾಸಕ!!ನೀವು ಉಗುಳಿರೋದನ್ನು ವಿಡಿಯೋನಲ್ಲಿ ನೋಡಿದ್ದೇನೆ ಎಂದು ಸ್ವಚ್ಛಗೊಳಿಸಿದ ಸ್ಪೀಕರ್‌!!ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget