ಕ್ರೈಂ

ಅಜ್ಜಾವರ: ಬೈಕ್-ಜೀಪ್ ನಡುವೆ ಭೀಕರ ಅಪಘಾತ, ಪತಿ ಸಾವು, ಪತ್ನಿ ಗಂಭೀರ

165

ನ್ಯೂಸ್ ನಾಟೌಟ್: ಬೈಕ್ – ಜೀಪ್ ನಡುವೆ ಅಜ್ಜಾವರದ ಮಾರ್ಗ ಎಂಬಲ್ಲಿ ಅಪಘಾತಕ್ಕೆ ಸಂಬಂಧಪಟ್ಟಂತೆ ದುರಂತದಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಜ್ಜಾವರ ಪಡ್ಡಂಬೈಲು ಕೆಎಫ್ ಡಿಸಿ ಉದ್ಯೋಗಿಯಾಗಿರುವ ವಿನಾಯಕ ಮೂರ್ತಿ‌ ಹಾಗೂ ಮಂಜುಳಾ ದಂಪತಿ ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿರುವಾಗ ಈ ದುರ್ಘಟನೆ ಸಂಭವಿಸಿತ್ತು.

ವಿನಾಯಕ ಮೂರ್ತಿಯವರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದ ಸಮಯದಲ್ಲಿ ಅವರು ಸಾವಿಗೀಡಾಗಿದ್ದರು ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಅವರ ಪತ್ನಿಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು ಅವರಿಗೂ ಹೆಚ್ಚಿನ ಗಾಯವಾಗಿದೆ ಎಂದು ತಿಳಿದು ಬಂದಿದೆ.

See also  ಕುಡಿದ ಮತ್ತಿನಲ್ಲಿ ಕುಡಿಯುವ ನೀರಿನ ಟ್ಯಾಂಕ್ ಏರಿ ರಂಪಾಟ..! ರಾತ್ರೋರಾತ್ರಿ ಟ್ಯಾಂಕ್ ಏರಿದ ನಟರಾಜ..! ಮುಂದೇನಾಯ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget