ಕರಾವಳಿ

ಐವರ್ನಾಡು: ಮೇ8ಕ್ಕೆ ದಿ.ಎನ್‌.ಎಂ.ಬಾಲಕೃಷ್ಣ ಗೌಡರ ಭವ್ಯ ಪುತ್ಥಳಿ ಲೋಕಾರ್ಪಣೆ

ಐವರ್ನಾಡು: ದಿ| ಎನ್‌.ಎಂ. ಬಾಲಕೃಷ್ಣ ಗೌಡರ ಪುತ್ಥಳಿ ರಚನಾ ಸಮಿತಿ ಐವರ್ನಾಡು ವತಿಯಿಂದ ಮುಂಬರುವ 08-05-2022 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಐವನಾರ್ಡಿನ ಕೇಂದ್ರ ಭಾಗದಲ್ಲಿ ಐವರ್ನಾಡಿನ ಅಣ್ಣ ಎಂದೇ ಖ್ಯಾತಿ ಪಡೆದಿರುವ ದಿ| ಎನ್‌.ಎಂ.ಬಾಲಕೃಷ್ಣ ಗೌಡರ ಭವ್ಯ ಪುತ್ಥಳಿ ಲೋಕಾರ್ಪಣಾ ಸಮಾರಂಭ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಡಿವಿ ಸದಾನಂದ ಗೌಡ ಪುತ್ಥಳಿಯ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಎಸ್. ಅಂಗಾರ ವಹಿಸಿಕೊಳ್ಳಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನಾಮಫಲಕ ಅನಾವರಣ ಹಾಗೂ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ.ದಾನಿಗಳ ನಾಮಫಲಕ ಅನಾವರಣಗೊಳಿಸಲಿದ್ದಾರೆ. ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಸಾಂದೀಪ್ ವಿಶೇಷ ಶಾಲೆ ಸುಳ್ಯದ ಅಧ್ಯಕ್ಷ ಎಂ.ಬಿ.ಸದಾಶಿವ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಉಪಸ್ಥಿತರಿರಲಿದ್ದಾರೆ.

Related posts

ಪಾಕ್‌ ಸೇನೆಯ ಡ್ರೋನ್ ಪುಡಿಗಟ್ಟಲು ಹದ್ದುಗಳ ಬಳಕೆ, ಭಾರತ ಸೇನೆಯಿಂದ ಮಹತ್ವದ ಪ್ರಯತ್ನ

‘ಕುಣಿತ ಭಜನೆ ಹೆಸರಲ್ಲಿ ರಸ್ತೆ ಬೀದಿಯಲ್ಲಿ ಹಿಂದುಳಿದ ವರ್ಗದ ಹಿಂದೂ ಹೆಣ್ಮಕ್ಕಳನ್ನು ಕುಣಿಸಲಾಗುತ್ತಿದೆ’ ಹೊಸ ಚರ್ಚೆಗೆ ಕಾರಣವಾದ ಕಾಂಗ್ರೆಸ್ ಮುಖಂಡೆ ಹೇಳಿಕೆ

ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸು, ಜೂ.8ರಿಂದ 11ರ ತನಕ ‘ಆರೆಂಜ್‌ ಅಲರ್ಟ್’