ಕರಾವಳಿವೈರಲ್ ನ್ಯೂಸ್ಸಿನಿಮಾ

ತುಳುನಾಡಿನ ಜಾರಂದಾಯ ನೇಮೋತ್ಸವದಲ್ಲಿ ದೈವದ ಅಭಯ ಪಡೆದ ತಮಿಳು ನಟ ವಿಶಾಲ್, 3 ಗಂಟೆಗಳ ಕಾಲ ನೇಮೋತ್ಸವ ವೀಕ್ಷಿಸಿದ ನಟ

ನ್ಯೂಸ್‌ ನಾಟೌಟ್: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾಗಿ ದೈವದ ಅಭಯ ಪಡೆದಿದ್ದಾರೆ.

ಮಂಗಳವಾರ(ಫೆ.11) ರಾತ್ರಿ ಮುಲ್ಕಿಯ ಪಕ್ಷಿಕೆರೆ ಸಮೀಪದ ಹರಿಪಾದೆಯಲ್ಲಿ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ಈ ವೇಳೆ ನಟ ವಿಶಾಲ್ ಆಗಮಿಸಿದ್ದರು. ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.

ವಿಶಾಲ್ ಆರೋಗ್ಯದಲ್ಲಿ ಏರು ಪೇರಾಗಿತ್ತು, ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ದೈವಸ್ಥಾನದ ಪ್ರಮುಖರು ಸೂಚಿಸಿದ್ದಾರೆ ಎನ್ನಲಾಗಿದೆ.

Related posts

ಖ್ಯಾತ ಯಕ್ಷಗಾನ ಭಾಗವತ ಆತ್ಮಹತ್ಯೆ

ಗ್ಯಾರಂಟಿ ಯೋಜನೆಗಾಗಿ ಹೊಸ ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಅರ್ಜಿ ಸ್ವೀಕಾರ ನಿಲ್ಲಿಸಿದ ಆಹಾರ ಇಲಾಖೆ!

ವಿರಾಜಪೇಟೆಯಲ್ಲಿ ಕೆ.ಜಿ.ಬೋಪಯ್ಯ ಹಿನ್ನಡೆ , ಎ.ಎಸ್ ಪೊನ್ನಣ್ಣ ಮುನ್ನಡೆ