ನ್ಯೂಸ್ ನಾಟೌಟ್: ಕನ್ನಡ ಬಿಗ್ ಬಾಸ್ ಸೀಸನ್ 7 ವಿನ್ನರ್ (Bigg Boss Winner) ಶೈನ್ ಶೆಟ್ಟಿ,ಕಳೆದ ಕೆಲವು ತಿಂಗಳಿಂದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಬೀಡು ಬಿಟ್ಟಿದ್ದು,ಇದೀಗ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ.
ಹೆಚ್ಚಾಗಿ ಹಿಮಾಲಯದ ತಪ್ಪಲಿನ ಪುಣ್ಯಧಾಮಗಳಿಗೆ ಭೇಟಿ ನೀಡುತ್ತಾ, ಧ್ಯಾನ ಮಾಡುತ್ತಾ ಕಾಣಿಸಿಕೊಳ್ಳುತ್ತಿದ್ದ ಇವರು ಇದೀಗ ಕುಂಭಮೇಳದಲ್ಲೂ ಶೈನ್ ಶೆಟ್ಟಿ ಹೈಲೈಟ್ ಆಗಿದ್ದಾರೆ. ಸಾಧು ಸನ್ಯಾಸಿಗಳ ಜೊತೆ ಶೈನ್ ಶೆಟ್ಟಿ ತಾವೂ ಕೂಡ ಖಾವಿ ಬಟ್ಟೆ ತೊಟ್ಟು, ಕುತ್ತಿಗೆಗೆ ರುದ್ರಾಕ್ಷಿ ಹಾರ ಧರಿಸಿದ್ದ ವಿಡಿಯೋ ವೈರಲ್ ಆಗಿದೆ.
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಬಂದು ಪುಳಕಿತರಾದ ಶೈನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡೀಯೋ ಶೇರ್ ಮಾಡಿದ್ದಾರೆ. ಕುಂಭ ಮೇಳದಲ್ಲಿ ಕಾಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಹೌದು ಅದು ನಿಜಾ, ನಾನು ಕುಂಭಮೇಳದ ಸೌಂದರ್ಯದಲ್ಲಿ ಕಳೆದು ಹೋದೆ. ನನ್ನನ್ನು ನಾನು ಈ ಮೊದಲು ಕಂಡಿರದ ರೀತಿಯಲ್ಲಿ ಕಂಡುಕೊಂಡೆ ಎಂಬುದಾಗಿ ಕುಂಭಮೇಳದ ದೈವೀಕತೆಯ ಬಗ್ಗೆ ವರ್ಣಿಸಿದ್ದಾರೆ.
ಜನವರಿ 14 ರಂದು ಮಕರ ಸಂಕ್ರಾಂತಿಯ ವೇಳೆ ಶೈನ್ ಶೆಟ್ಟಿ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಅಲ್ಲಿಯೇ ಹಲವು ದಿನಗಳನ್ನು ಸಹ ಕಳೆದಿದ್ದಾರೆ. ಶೈನ್ ಶೆಟ್ಟಿಯವರು ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನಟಿಸಿದ್ದು ಅದೀಗ ತನ್ನ ಟೀಸರ್ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ, ಆದರೆ ಸಿನಿಮಾ ರಿಲೀಸ್ ಆಗೋದಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ.