Latestದೇಶ-ವಿದೇಶವೈರಲ್ ನ್ಯೂಸ್

‘ಅಭಿ ಪಿಕ್ಚರ್ ಬಾಕಿ ಹೈ’ ಎಂದ ಮಾಜಿ ಸೇನಾ ಮುಖ್ಯಸ್ಥ..! ಮನೋಜ್ ನರವನೆ ಯುದ್ಧದ ಸುಳಿವು ಕೊಟ್ಟರಾ..?

648

ನ್ಯೂಸ್ ನಾಟೌಟ್: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ತಾಣಗಳ ಮೇಲೆ ಭಾರತ ದಾಳಿ ಮಾಡಿ 70ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದೆ. ಪಾಕಿಸ್ತಾನ ಕೂಡ ತಾನು ಭಾರತೀಯ ಜೆಟ್ ​​​ಗಳನ್ನು ಹೊಡೆದುರುಳಿಸಿ, ಕೆಲ ಭಾರತೀಯ ಸೈನಿಕರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದೆ. ಇದೇ ವೇಳೆ, ಭಾರತದ ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಮಾಡಿದ ಎಕ್ಸ್ ಪೋಸ್ಟ್ ಕುತೂಹಲ ಮೂಡಿಸಿದೆ. ಭಾರತದಿಂದ ಇನ್ನೂ ದೊಡ್ಡ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಜನರಲ್ ಮನೋಜ್ ನರವಣೆ ‘ಅಭಿ ಪಿಕ್ಚರ್ ಬಾಕಿ ಹೈ’ ಎಂದು ಒನ್ ​​ಲೈನರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಬಿಟ್ಟು ಬೇರೇನೂ ಬರೆದಿಲ್ಲ. ಭಾರತದ ಮಿಲಿಟರಿಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆದ ಬಳಿಕ ಈ ಪೋಸ್ಟ್ ಬಂದಿದೆ. ಭಾರತೀಯ ಸೇನೆ ಇನ್ನೂ ದೊಡ್ಡ ದಾಳಿ ಮಾಡುವ ಸಾಧ್ಯತೆ ಇದೆ ಎಂಬುದು ಅವರ ಪೋಸ್ಟ್ ​​​ನ ಈ ನಿಗೂಢ ಅರ್ಥವಿರಬಹುದೆ?

ಪಾಕಿಸ್ತಾನ ತಾನು ಯಾವುದೇ ಪ್ರತಿದಾಳಿಗೆ ಸಿದ್ಧ ಎಂದು ಹೇಳಿಕೊಳ್ಳುತ್ತಿದೆ. ಭಾರತ ತನ್ನ ಕಾರ್ಯಾಚರಣೆ ನಿಲ್ಲಿಸಿದರೆ ತಾನೂ ಕೂಡ ಜವಾಬ್ದಾರಿಯುತವಾಗಿ ಪ್ರತಿಕ್ರಿಯೆ ನಿಲ್ಲಿಸುವುದಾಗಿ ಪಾಕ್ ಹೇಳಿದೆ.

ರಾತ್ರಿ 1 ಗಂಟೆಯ ಬಳಿಕ ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಸಂಘಟಿತರಾಗಿ ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆ ನಡೆಸಿವೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರೆ ತೈಯಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಷೆ ಸಂಘಟನೆಗಳಿಗೆ ಸೇರಿದ 9 ಸ್ಥಳಗಳ ಮೇಲೆ ನಿರ್ದಿಷ್ಟವಾಗಿ ಗುರಿ ಮಾಡಿ ಸ್ಟ್ರೈಕ್ ಮಾಡಲಾಗಿದೆ.

ʻಸಿಂಧೂರʼ ಪದದ ಅರ್ಥ ಹುಡುಕಾಡುತ್ತಿರುವ ಪಾಕಿಸ್ತಾನದ ಜನ..! ಗೂಗಲ್‌ ನಲ್ಲಿ ಟ್ರೆಂಡ್‌..!

ಆಪರೇಷನ್‌ ಸಿಂಧೂರ: ಚೀನಾ ನಿರ್ಮಿತ ಪಾಕ್‌ ನ JF-17 ವಿಮಾನವನ್ನು ಹೊಡೆದು ಹಾಕಿದ ಭಾರತ..! ಭಾರತದ ದಾಳಿಯನ್ನು ತಡೆಯಲು ಬಂದಿದ್ದ ಈ ಯುದ್ಧ ವಿಮಾನ..!

See also  ಕೊಡಗಿನಲ್ಲಿ ಮಾವು ಮತ್ತು ಹಲಸು ಮೇಳ, 4 ದಿನಗಳ ಹಣ್ಣಿನ ಮೇಳಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget