ಕರಾವಳಿ

ಶ್ರೀ ಡಾ ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಸೋತ್ಸವದ ಪೂರ್ವಭಾವಿ ಸಭೆಗೆ ಆಹ್ವಾನ

314

ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ಬೈರವೈಕ್ಯ ಶ್ರೀ ಡಾ ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಸೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ವಿವಿಧ ಕಡೆ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿ ನೇತೃತ್ವದಲ್ಲಿ ಶಾಸಕ ಸಂಜೀವ ಮಠಂದೂರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

8-12-2022ರಂದು ಮಧ್ಯಾಹ್ನ ಗಂಟೆ 2ಕ್ಕೆ ಉದನೆ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲ್ , ತಾ 9-12-2022ರಂದು ಬೆಳಗ್ಗೆ ಗಂಟೆ 10ಕ್ಕೆ ಕಡಬ ಒಕ್ಕಲಿಗ ಸಂಘದ ಹಾಲ್‌, ಮಧ್ಯಾಹ್ನ 2.30ಕ್ಕೆ ಪಂಚಾಯತ್ ಸಭಾಭವನ ಕುಮಾರಧಾರ ಸುಬ್ರಹ್ಮಣ್ಯ, ಸಂಜೆ 4.30ಕ್ಕೆ ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದ ಹಾಲ್‌, ತಾ 10 -12-2022ರಂದು ಮಧ್ಯಾಹ್ನ ಗಂಟೆ 2ಕ್ಕೆ ಕುಂಬ್ರ ಶ್ರೀಧಾಮ ಭಜನಾ ಮಂದಿರ ಹಾಲ್ (ಕುಂಬ್ರ ವಲಯ), ಸಂಜೆ 4ಗಂಟೆಗೆ ಕೊಳ್ತಿಗೆ ಬಾಯಂಬಾಡಿ ಶ್ರೀ ಷಣ್ಮುಖ ದೇವಸ್ಥಾನದ ಹಾಲ್ (ಕೊಳ್ತಿಗೆ ಗ್ರಾಮ), ತಾ11-12-2022ರಂದು ಮಧ್ಯಾಹ್ನ ಗಂಟೆ 2ಕ್ಕೆ ಸರ್ವೋದಯ ಶಾಲೆ ಪೆರಿಯಡ್ಕ (ಉಪ್ಪಿನಂಗಡಿ ವಲಯ), ಸಂಜೆ 4ಕ್ಕೆ ಚುಂಚಶ್ರೀ ಸಭಾಭವನ ಒಕ್ಕಲಿಗ ಗೌಡ ಸಮುದಾಯ ಭವನ ತೆಕ್ಕಿಲ (ಪುತ್ತೂರು ವಲಯ), ತಾ `12 -12-2022ರಂದು ಮಧ್ಯಾಹ್ನ ಗಂಟೆ ೨ಕ್ಕೆ ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದ ಹಾಲ್ (ಸವಣೂರು ವಲಯ), ಸಂಜೆ ಗಂಟೆ 4ಕ್ಕೆ ಭಾರತೀ ಶಾಲೆ ಆಲಂಗಾರು (ಆಲಂಗಾರು ವಲಯ)ನಲ್ಲಿ ನಡೆಯಲಿದೆ. ಈ ಸಭೆಗಳಲ್ಲಿ ಒಕ್ಕಲಿಗ ಸಮುದಾಯದ ಹೆಚ್ಚಿನ ಜನರು ಭಾಗವಹಿಸಬೇಕೆಂದು ಕೋರಲಾಗಿದೆ.

See also  ಸುಳ್ಯ: ಕುಸಲ್ದರಸೆ ನವೀನ್ ಡಿ. ಪಡೀಲ್‌ರಿಗೆ 'ಮೂಗಜ್ಜನ ಕೋಳಿ' ಚಿತ್ರಕ್ಕೆ 'ಅತ್ಯುತ್ತಮ ನಟ' ಪ್ರಶಸ್ತಿ ,ಸುಳ್ಯದ ಒಕ್ಕಲಿಗರು ಆಡುವ ಭಾಷೆ ಅರೆ ಭಾಷೆಯ ಮೊದಲ ಸಿನಿಮಾದಲ್ಲಿ ಅಭಿನಯಿಸಿದ್ದ ತುಳು ಹಾಸ್ಯನಟ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget