ಕರಾವಳಿಕ್ರೈಂಬೆಂಗಳೂರು

ಮದುವೆಗೂ ಮುನ್ನ ಒಟ್ಟಿಗೆ ಸ್ನಾನಕ್ಕಿಳಿದ ಯುವಕ-ಯುವತಿ,ಮುಂದೆ ಆಯ್ತು ಯಾರೂ ಊಹಿಸದ ಘಟನೆ!

217

ನ್ಯೂಸ್ ನಾಟೌಟ್: ಇನ್ನೇನು ಸ್ವಲ್ಪ ದಿನ ಕಾಯುತ್ತಿದ್ದರೆ ಅವರಿಬ್ಬರಿಗೆ ಮದುವೆಯಾಗುತ್ತಿತ್ತು.ಆದರೆ ವಿಧಿಯಾಟವನ್ನು ತಪ್ಪಿಸಕ್ಕಾಗುತ್ತಾ?ಮದುವೆ ಮುಂಚಿತವಾಗಿ ಜೋಡಿ ಸ್ನಾನದ ಕೊಠಡಿಗೆ ಸ್ನಾನಕ್ಕೆಂದು ಹೋಗಿದ್ದಾರೆ.ನಂತರ ಹಿಂತಿರುಗಿ ಬರಲೇ ಇಲ್ಲ!!.

ಹೌದು ,ಇಬ್ಬರು ಮದುವೆಯಾಗಬೇಕಾದವರು ಬಾತ್‌ ರೂಂನಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲ್ಲೂಕು ಚಂದ್ರಶೇಖರ್‌, ಗೋಕಾಕ್‌ ತಾಲ್ಲೂಕು ಸುಧಾರಾಣಿ ಇಬ್ಬರು ಮದುವೆ ಆಗಲು ನಿಶ್ಚಯಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಲು ತಯಾರಿ ನಡೆಸಿದ್ದರು. ಆದರೆ ಇಬ್ಬರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದು, ಅಲ್ಲೇ ಶವವಾಗಿ ಪತ್ತೆಯಾಗಿದ್ದಾರೆ.

ಸಾವಿಗೆ ಕಾರಣವೇನು?

ಎರಡು ದಿನದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಮಾಲೀಕ ಅನುಮಾನದ ಮೇರೆಗೆ ಪೊಲೀಸರಿಗೆ ವಿಚಾರ ತಿಳಿಸಿದಾಗ ಕೂಡಲೇ ಪೊಲೀಸರು ಬಂದು ಪರಿಶೀಲಿಸಿದರು.ಇಬ್ಬರು ಸ್ನಾನಗೃಹದಲ್ಲೇ ಸಾವನ್ನಪ್ಪಿರುವುದು ಗೊತ್ತಾಗಿದೆ.ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕಾರ್ಬನ್‌ ಮೋನಾಕ್ಸೈಡ್‌ ಸೋರಿಕೆಯಾಗಿರುವ ಭಯಾನಕ ಅಂಶ ಬೆಳಕಿಗೆ ಬಂದಿದೆ.

ಚಂದ್ರಶೇಖರ್‌ ತರಬನ ಹಳ್ಳಿ ಬಳಿ ಮನೆ ಮಾಡಿಕೊಂಡಿದ್ದ. ಜೂನ್‌ 10ರಂದು ಸುಧಾರಾಣಿ ಆತನ ಮನೆಗೆ ಬಂದಿದ್ದಾಳೆ. ಈ ವೇಳೆ ಇಬ್ಬರು ಒಟ್ಟಿಗೆ ಸ್ನಾನದ ಗೃಹ ಹೊಕ್ಕಿದ್ದಾರೆ. ಗ್ಯಾಸ್‌ ಗೀಸರ್‌ ಆನ್‌ ಮಾಡಿಕೊಂಡು ಬಾತ್‌ ರೂಮ್‌ ಗೆ ತೆರಳಿದ್ದಾರೆ. ಈ ವೇಳೆ ಬಾತ್‌ ರೂಮ್‌ ನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್‌ ಮಾಡಿ ಇಬ್ಬರು ಸ್ನಾನ ಮಾಡಿದ್ದಾರೆ. ಆದರೆ ಗ್ಯಾಸ್‌ ಗೀಸರ್‌ ನಿಂದ ವಿಷ ಅನಿಲ ಕಾರ್ಬನ್‌ ಮೋನಾಕ್ಸೈಡ್‌ ಸೋರಿಕೆಯಾಗಿ ಇಬ್ಬರು ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಚಂದ್ರಶೇಖರ್‌ ಮತ್ತು ಸುಧಾರಾಣಿ ಇಬ್ಬರೂ ನಂದಿಹಿಲ್ಲ್‌ ಬಳಿಯ ಗಾಲ್ಡ್‌ ಹೋಟೆಲ್‌ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಆದರೆ ಮದುವೆಗೂ ಮುನ್ನವೇ ಮಸಣ ಸೇರಿದ್ದಾರೆ. ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಕಳಚಿ ಬಿತ್ತು ತೆಂಕು ತಿಟ್ಟಿನ ಯಕ್ಷಗಾನ ಪರಂಪರೆಯ ಹಿರಿಯ ಕೊಂಡಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget