ಚಿಕ್ಕಮಗಳೂರು

ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆಗೆ ಹೊಡೆದು ಬಾರದ ಲೋಕಕ್ಕೆ ಕಳುಹಿಸಿದ ಪಾಪಿ ಪತಿ,ಮುಗಿಲು ಮುಟ್ಟಿದ ಇಬ್ಬರು ಪುತ್ರಿಯರ ಆಕ್ರಂದನ..!

155

ನ್ಯೂಸ್ ನಾಟೌಟ್ : ಕಿತ್ತು ತಿನ್ನುವ ಬಡತನ,ಕುಡುಕ ಪತಿ, ಇಬ್ಬರು ಹೆಣ್ಮಕ್ಕಳನ್ನು ಸಾಕುವ ಹೊರೆ ಇದೆಲ್ಲವನ್ನು ನಿಭಾಯಿಸಿಕೊಂಡು ಆಕೆ ಬದುಕಿನ ಬಂಡಿಯನ್ನು ಸಾಗಿಸಬೇಕು..ಇವತ್ತಲ್ಲ ನಾಳೆ ಒಳ್ಳೆಯದಾಗುತ್ತೆ ಎನ್ನುತ್ತಾ ಪ್ರತಿದಿನ ಬಾಗಿಲಿಗೆ ಅರಿಶಿನ ಕುಂಕುಮ ಹಚ್ಚಿ ಮನೆಗೆ ಬೆಳಕಾಗಿದ್ದಳು .ಆದರೆ ಕುಡಿದ ಮತ್ತಿನಲ್ಲಿದ್ದ ಪಾಪಿ ಪತಿಗೆ ಪತ್ನಿ ಅದೇಗೆ ಕಂಡಳೋ ಏನೋ.. ಕೊಡಲಿಯಿಂದ ಹೊಡೆದು ಆಕೆಯನ್ನು ಬಾರದ ಲೋಕಕ್ಕೆ ಕಳುಹಿಸಿಕೊಟ್ಟಿದ್ದಾನೆ..!

ಇಂತಹ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ.ತಾಯಿಯನ್ನು ಕಳೆದುಕೊಂಡು ಇಬ್ಬರು ಹೆಣ್ಣು ಮಕ್ಕಳು ಈಗ ಅನಾಥವಾಗಿದ್ದಾರೆ.ಕುಡಿತದ ಚಟಕ್ಕೆ ಒಳಗಾಗಿದ್ದ ಪತಿಗೆ ಹೆಂಡತಿ ಬುದ್ದಿವಾದ ಹೇಳಿದ್ದಳು.ಆದರೆ ಇದೇ ವಿಚಾರಕ್ಕೆ ಗಂಡ-ಹೆಂಡ್ತಿ ಮಧ್ಯೆ ತೀವ್ರ ಗಲಾಟೆ ಏರ್ಪಟ್ಟಿತು.ಮುಂದೆ ಏನಾಗ್ತಿದೆ ಎಂದು ಆತನಿಗೂ ತಿಳಿಯದಾಯಿತು.ಕೈಗೆ ಸಿಕ್ಕಿದ ಕೊಡಲಿಯಿಂದಲೇ ಆಕೆ ಶಾಶ್ವತವಾಗಿ ಕಣ್ಣು ಮುಚ್ಚುವಂತೆ ಮಾಡಿದ್ದ.

ರಾತ್ರಿ ವೇಳೆ ಕೊಡಲಿಯಿಂದ ಹೊಡೆದು ಮನೆಯಿಂದ ಪತ್ನಿಯನ್ನು ಹೊರ ತಳ್ಳಿದ್ದ ಪಾಪಿ ಪತಿ ಮನೆಯೊಳಗೆ ಬೆಚ್ಚಗೆ ಮಲಗಿದ್ದ..! ಆದರೆ ಮನೆಯಿಂದ ಹೊರಗುಳಿದ ಪತ್ನಿ ಅಲ್ಲೇ ನರಳಾಡಿ ನರಳಾಡಿ ಪದ್ಮಾಕ್ಷಿ (40) ದುರಂತ ಅಂತ್ಯವನ್ನೇ ಕಂಡಳು.ಆದರೆ ತಮ್ಮ ತಾಯಿ ಒಂದು ದಿನ ಈ ರೀತಿಯೂ ಅಂತ್ಯ ಕಾಣುವರು ಎಂಬ ಯಾವ ಕಲ್ಪನೆಯೂ ಇಲ್ಲದ ಹೆಣ್ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.ದುರದೃಷ್ಟವಶಾತ್..ಆ ಇಬ್ಬರು ಹೆಣ್ಮಕ್ಕಳು ಇಲ್ಲದಿರುವ ವೇಳೆಯೇ ಈ ದುರಂತ ಸಂಭವಿಸಿದೆ.ಬಹುಶಃ ಆ ಇಬ್ಬರು ಹೆಣ್ಮಕ್ಕಳು ಮನೆಯಲ್ಲಿ ಇರುತ್ತಿದ್ದರೆ ಆ ತಾಯಿ ಇಂದು ಬದುಕುತ್ತಿದ್ದರೋ ಏನೋ..!

ಇತ್ತ ಬೆಳಗ್ಗೆ ಅಮಲು ಇಳಿಸಿಕೊಂಡ ಗಂಡನಿಗೂ ಹೆಂಡತಿಯನ್ನು ನೋಡಿ ಶಾಕ್‌ ಆಗಿದೆ.ಯಾಕೆಂದರೆ ಕುಡಿದ ಮತ್ತಿನಲ್ಲಿದ್ದ ಗಂಡನಿಗೆ ತನ್ನ ಹೆಂಡತಿಗೆ ಹೊಡೆದಿರೋದು ಆತನಿಗೆ ತಿಳಿಯದಾಗಿದೆ.ಗೋಣಿಬೀಡು ಪೊಲೀಸರು ಭೇಟಿ ನೀಡಿದ್ದು,ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

See also  ಚಿಕ್ಕಮಗಳೂರು ಪ್ರವಾಸವನ್ನು15 ದಿನ ಮುಂದೂಡುವಂತೆ ಜಿಲ್ಲಾಡಳಿತ ಮನವಿ..! ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮಳೆಯ ಜೊತೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget