ನ್ಯೂಸ್ ನಾಟೌಟ್: ಬಿಸ್ಕತ್ ತುಂಬಿದ ಲಾರಿಯೊಂದಕ್ಕೆ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ದೇವರ ಕೊಲ್ಲಿ ಬಳಿ ಸಂಭವಿಸಿದೆ. ಫೆ. 26ರ ಬುಧವಾರ ಬೆಳಗ್ಗಿನ ಜಾವಾ ಸುಮಾರು 5.30ಕ್ಕೆ ಈ ದುರ್ಘಟನೆ ಬಗ್ಗೆ ವರದಿಯಾಗಿದ್ದು,.ಘಟನೆಯ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಸ್ಥಳದಲ್ಲಿ ಸ್ಥಳೀಯರು ಸೇರಿದಂತೆ ನೂರಾರು ಮಂದಿ ಜಮಾಯಿಸಿದ್ದರು. ಬಳಿಕ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.
View this post on Instagram