Latestಉಡುಪಿದಕ್ಷಿಣ ಕನ್ನಡ

ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ವಿದ್ಯಾರ್ಥಿಗಳಿಂದ ಹೊಡೆದಾಟ!ಪೊಲೀಸರು ಆಗಮಿಸುತ್ತಿದ್ದ ಸ್ಥಳದಿಂದ ಎಸ್ಕೇಪ್‌

1.4k
Spread the love

ನ್ಯೂಸ್‌ ನಾಟೌಟ್‌ :  ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಎರಡು ವಿದ್ಯಾರ್ಥಿಗಳ ಗುಂಪು ಪರಸ್ಪರ ಬಡಿದಾಡಿಕೊಂಡ ಘಟನೆ ಉಡುಪಿಯ ಮಣಿಪಾಲ್‍ನ ಕಾಯಿನ್ ಸರ್ಕಲ್ ಬಳಿ ನಡೆದಿದೆ.ಬಾರ್ ಒಂದರ ಮುಂದೆ ಪರಸ್ಪರ ಬಡಿದಾಡಿಕೊಂಡು ದಾಂಧಲೆ ಎಬ್ಬಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವಿದ್ಯಾರ್ಥಿಗಳ ಈ ರಂಪಾಟಕ್ಕೆ ಸಾರ್ವಜನಿಕರೇ ಶಾಕ್‌ಗೊಳಗಾಗಿದ್ದಾರೆ.

ಗಲಾಟೆಯ ತೀವ್ರತೆಗೆ ಓರ್ವ ವಿದ್ಯಾರ್ಥಿಯ ಬಟ್ಟೆ ಹರಿದು ಹೋಗಿದೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಹೊಡೆದಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.ವಿದ್ಯಾರ್ಥಿಗಳ ಹೊಡೆದಾಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮಣಿಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

See also  17 ವರ್ಷದ ಬಳಿಕ ಮೊದಲ ಬಾರಿ ಲಾಭ ಕಂಡ ಬಿ.ಎಸ್.ಎನ್.ಎಲ್..! ಈ ಬಗ್ಗೆ BSNLನ ಎಂ.ಡಿ ಹೇಳಿದ್ದೇನು..?
  Ad Widget   Ad Widget   Ad Widget   Ad Widget