ನ್ಯೂಸ್ ನಾಟೌಟ್: ಸರಣಿ ಭೂಕಂಪಗಳಿಗೆ ಕೇಂದ್ರ ಬಿಂದುವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಚೆಂಬು ಗ್ರಾಮ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. ಇಂದು ಬೆಳ್ಳಂ ಬೆಳಗ್ಗೆ 4.39 ಕ್ಕೆ ಭಾರಿ ಶಬ್ಧವೊಂದು ಚೆಂಬು ಗ್ರಾಮದಲ್ಲಿ ಕೇಳಿಸಿಕೊಂಡಿದೆ. ಇದರಿಂದಾಗಿ ಜನರು ಗಾಬರಿಯಾಗಿದ್ದಾರೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್, ಚೆಂಬು ಗ್ರಾಮದಲ್ಲಿ ಶಬ್ಧವಾಗಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಆದರೆ ಭೂಕಂಪ ಆಗಿರುವ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಜನರು ಅನಾವಶ್ಯಕವಾಗಿ ಗಾಬರಿಯಾಗಬೇಕಿಲ್ಲ. ಭೂಮಿಯೊಳಗಿನ ರಾಸಾಯನಿಕ ಕ್ರಿಯೆಗಳಿಂದ ಕೆಲವು ಬಾರಿ ಶಬ್ಧವಾಗಿರಬಹುದು. ಆದರೆ ಅದುವೇ ಭೂಕಂಪ ಎಂದು ಜನರು ಭಯಪಡಬೇಕಿಲ್ಲ ಎಂದು ತಿಳಿಸಿದ್ದಾರೆ.