ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಸಹೋದರರ ನಡುವೆ ತಂದೆಯ ಅಂತ್ಯಕ್ರಿಯೆಗಾಗಿ ಜಗಳ..! ತಂದೆಯ ಅರ್ಧ ಮೃತದೇಹ ಕೇಳಿದ ಮಗ..!

ನ್ಯೂಸ್ ನಾಟೌಟ್: ಸಹೋದರನೊಂದಿಗೆ ತಂದೆಯ ಅಂತ್ಯಕ್ರಿಯೆ ವಿಚಾರವಾಗಿ ಗಲಾಟೆ ಮಾಡಿಕೊಂಡು ಶವಸಂಸ್ಕಾರಕ್ಕೆ ಅರ್ಧ ಮೃತದೇಹ ಕೊಡುವಂತೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ಮಧ್ಯಪ್ರದೇಶದ ಟಿಕಮ್‌ ಗಢ್ ಜಿಲ್ಲೆಯಲ್ಲಿ ನಡೆದಿದೆ.

ಸಹೋದರರ ಗಲಾಟೆ ತಾರಕಕ್ಕೇರಿದ ಕಾರಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಕಿರಿಯ ಮಗ ದೇಶರಾಜ್‌ ಎನ್ನುವವರೊಂದಿಗೆ ವಾಸಿಸುತ್ತಿದ್ದ ಧ್ಯಾನಿ ಸಿಂಗ್‌ ಗೋಷ್‌ ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ(ಫೆ.2) ಮೃತಪಟ್ಟಿದ್ದರು. ಗ್ರಾಮದ ಹೊರಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಹಿರಿಯ ಮಗ ಕಿಶನ್‌ ಸುದ್ದಿ ತಿಳಿಯುತ್ತಿದ್ದಂತೆ ದೇಶರಾಜ್ ಮನೆಗೆ ಬಂದಿದ್ದರು.

ಈ ವೇಳೆ ಹಿರಿಯ ಮಗ ಕಿಶನ್ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡುವುದಾಗಿ ಹೇಳಿ ಗಲಾಟೆ ಮಾಡಿದ್ದಾನೆ. ಆದರೆ ಕಿರಿಯ ಮಗ ಶವಸಂಸ್ಕಾರವನ್ನು ನಡೆಸುವುದು ಮೃತ ವ್ಯಕ್ತಿಯ ಬಯಕೆ ಎಂದು ಹೇಳಿಕೊಂಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಕಿಶನ್, ದೇಹವನ್ನು ಅರ್ಧದಷ್ಟು ಕತ್ತರಿಸಿ ಸಹೋದರರ ನಡುವೆ ಹಂಚಬೇಕೆಂದು ಒತ್ತಾಯಿಸಿದ್ದಾನೆ. ಇದೇ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ ಕಿಶನ್‌ ನನ್ನು ಮನವೊಲಿಸಿದ್ದು, ಕಿರಿಯ ಮಗ ಶವಸಂಸ್ಕಾರವನ್ನು ನೆರವೇರಿಸಿದರು ಎನ್ನಲಾಗಿದೆ.

Related posts

ಕರೋಕೆ ಮೈಕ್‌ನ್ನು ಚಾರ್ಜ್‌ಗಿಟ್ಟು ಹಾಡುವಾಗ ಭಾರಿ ಶಬ್ದದೊಂದಿಗೆ ಸ್ಫೋಟ:ಬಾಲಕಿಗೇನಾಯ್ತು?ಏನಿದು ಘಟನೆ?

ಅಧಿಕ ಆದಾಯ ಇರುವ 32,092 ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ ಪತ್ತೆ..! 392 ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್‌..! ತಪ್ಪಿತಸ್ಥರ ವಿರುದ್ಧ ನೋಟಿಸ್ ಜಾರಿ

ಮೊದಲ ರಾತ್ರಿಯೇ ಗಂಡನ ಜೀವಕ್ಕೆ ಗಂಡಾಂತರ! ಸೀಲಿಂಗ್ ಫ್ಯಾನ್ ಬಿದ್ದು ಮದುಮಗನ ಸ್ಥಿತಿ ಗಂಭೀರ!