ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಮಾಜಿ ಐಎಎಸ್ ಅಧಿಕಾರಿಗೆ 5 ವರ್ಷ ಜೈಲು..! ಸರ್ಕಾರದ ಖಜಾನೆಗೆ 1.2 ಕೋಟಿ ರೂ. ನಷ್ಟ ಉಂಟುಮಾಡಿ ಕಂಪನಿಯೊಂದಕ್ಕೆ ಭೂಮಿ ಮಂಜೂರು ಆರೋಪ..!

ನ್ಯೂಸ್ ನಾಟೌಟ್: ಸರ್ಕಾರದ ಖಜಾನೆಗೆ 1.2 ಕೋಟಿ ರೂ. ನಷ್ಟ ಉಂಟುಮಾಡಿ ಕಂಪನಿಯೊಂದಕ್ಕೆ ಭೂಮಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ನ ಮಾಜಿ ಐಎಎಸ್ ಅಧಿಕಾರಿಗೆ ಅಹಮದಾಬಾದ್ ಜಿಲ್ಲಾ ನ್ಯಾಯಾಲಯವು 5 ವರ್ಷ ಜೈಲು ಹಾಗೂ 75,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಶಿಕ್ಷಗೆ ಗುರಿಯಾದ ಮಾಜಿ ಐಎಎಸ್ ಅಧಿಕಾರಿಯನ್ನು ಪ್ರದೀಪ್ ಶರ್ಮಾ ಎಂದು ಗುರುತಿಸಲಾಗಿದೆ. ಅವರು 2004ರಲ್ಲಿ ಗುಜರಾತ್‌ ನ ಕಚ್ ಜಿಲ್ಲೆಯ ಕಲೆಕ್ಟರ್ ಆಗಿದ್ದಾಗ ಈ ಭ್ರಷ್ಟಾಚಾರ ನಡೆದಿತ್ತು. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ಸೋಜಿತ್ರ ಅವರಿದ್ದ ಏಕಸದಸ್ಯ ಪೀಠ ಶಿಕ್ಷೆಯನ್ನು ಪ್ರಕಟಿಸಿದೆ.

ಮಾಜಿ ಐಎಎಸ್ ತನ್ನ ಪತ್ನಿ ಶ್ಯಾಮಲಾ ಅವರನ್ನು ವ್ಯಾಲ್ಯೂ ಪ್ಯಾಕೇಜಿಂಗ್ ಸಂಸ್ಥೆಯಲ್ಲಿ ಪಾಲುದಾರರನ್ನಾಗಿಸಿ, ಈ ಸಂಸ್ಥೆಗೆ ಕಡಿಮೆ ದರಕ್ಕೆ ಭೂಮಿ ಮಂಜೂರು ಮಾಡಿರುವುದು ಮತ್ತು ಲಂಚ ಪಡೆದ ಪ್ರಕರಣದಲ್ಲಿ ಶರ್ಮಾಗೆ ಶಿಕ್ಷೆಯಾಗಿದೆ ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಆರ್.ಸಿ.ಕೊಡೆಕಾರ್ ಮಾಹಿತಿ ನೀಡಿದ್ದಾರೆ.

Click

https://newsnotout.com/2025/01/bus-incident-kananda-news-bengaluru-viral-news-arrested/
https://newsnotout.com/2025/01/kannada-news-duplicate-number-plate-viral-news-vehicle/
https://newsnotout.com/2025/01/naxal-in-chattisghar-viral-encounter-kannada-news-df/

Related posts

ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ ಗೆ ಬಿಬಿಎಂಪಿಯಿಂದ ನೋಟಿಸ್‌..! ಕಾನೂನು ನಿಯಮಗಳ ಉಲ್ಲಂಘನೆ ಆರೋಪ..!

Poonam Panday:’ನಾನು ಜೀವಂತವಾಗಿದ್ದೇನೆ’ -ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹರಿಯಬಿಟ್ಟ ನಟಿ ಪೂನಂ ಪಾಂಡೆ..!ಗರ್ಭ ಕಂಠದ ಕ್ಯಾನ್ಸರ್ ಜಾಗೃತಿಗಾಗಿ ಹೀಗೆ ಮಾಡಿದೆ,ಕೊನೆಗೂ ‘ಪೂನಂ ಕೊನೆಯುಸಿರು ಸುಳ್ಳು ಸುದ್ದಿ’ಯೆನ್ನುವ ಜನರಾಡಿದ ಮಾತೇ ನಿಜವಾಯಿತು..!

‘ನಾನು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ರು’ ಎಂದು ಬೇಸರಿಸಿಕೊಂಡ ರಘುಪತಿ ಭಟ್..! 6 ವರ್ಷ ರಘುಪತಿ ಭಟ್ ಬಿಜೆಪಿಯಿಂದ ವಜಾ..?