ಅರಂತೋಡು: ಇಲ್ಲಿನ ಏಮೇಕಲ್ ಚಡವು ಬಳಿಯ ಶುಂಠ್ಯಡ್ಕದಲ್ಲಿ ಆನೆಗಳು ತೋಟಕ್ಕೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಕೃಷಿ ಚಟುವಟಿಕೆಗಳನ್ನು ನಾಶ ಮಾಡಿವೆ ಎಂದು ವರದಿಯಾಗಿದೆ.
ಕಳೆದೆರಡು ದಿನಗಳ ಕಾಲ ಏಮೇಕಲ್ ಚಡವು ಬಳಿ ಸಂಜೆ ವೇಳೆಗೆ ರಸ್ತೆ ಬದಿಯಲ್ಲಿ ನಿಂತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದ ಒಂಟಿ ಸಲಗ ಕಳೆದ ರಾತ್ರಿ ಶುಂಠ್ಯಡ್ಕದ ಐತಪ್ಪ ನಾಯ್ಕ್ ರವರ ಕೃಷಿ ತೋಟಕ್ಕೆ ದಾಳಿ ಮಾಡಿದ್ದು ಫಲಭರಿತ ಬಾಳೆ, ಅಡಿಕೆ ಮರ, ತೆಂಗಿನ ಮರ, ಕೊಕ್ಕೋ ಗಿಡಗಳು ಮತ್ತು ಇತರ ಕೃಷಿ ಬೆಳೆ ನಾಶ ಪಡಿಸಿದೆ ಎಂದು ತಿಳಿದು ಬಂದಿದೆ.