ಕರಾವಳಿ

ಕಲ್ಲುಗುಂಡಿ: ಭಾರಿ ಗಾಳಿ ಮಳೆ, ಧರೆಗುರುಳಿದ ತೆಂಗಿನ ಮರ, ವ್ಯಕ್ತಿಗೆ ಗಾಯ

ಕಲ್ಲುಗುಂಡಿ: ಭಾರಿ ಗಾಳಿ ಮಳೆಗೆ ಕಲ್ಲುಗುಂಡಿಯ ಮುಖ್ಯ ಪೇಟೆಯ ಚರ್ಚ್ ರಸ್ತೆಯಲ್ಲಿರುವ ತೆಂಗಿನ ಮರವೊಂದು ಧರೆಗೆ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಸಂಜೆ ನಡೆದಿದೆ. ಈ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಾಯಾಳುವನ್ನು ಕಳಮೆ ಬಾಲಕೃಷ್ಣ (55) ಎಂದು ಗುರುತಿಸಲಾಗಿದೆ. ಗಾಳಿ ಬೀಸಿದ ಸಮಯದಲ್ಲಿ ಚರ್ಚ್ ರಸ್ತೆಯಲ್ಲಿದ್ದ ತೆಂಗಿನ ಮರ ಧರೆಗುರುಳಿತು. ಅದೃಷ್ಟವಷಾತ್ ವಿದ್ಯುತ್ ಲೈನ್ ಗೆ ತಾಗಿ ತೆಂಗಿನ ಮರ ನೇತಾಡಿತು. ಹೀಗಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಗಾಯಾಳುವನ್ನು ಪರೀಕ್ಷಿಸಿದ ಸ್ಥಳೀಯ ಕ್ಲಿನಿಕ್ ನ ವೈದ್ಯರು ಸುಳ್ಯದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೆಂಗಿನ ಮರ ಬಿದ್ದಿರುವುದರ ಪರಿಣಾಮ ಅಕ್ಕಪಕ್ಕದ ಮನೆಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Related posts

ಸರ್ಕಾರಿ ಭೂಮಿ ಸಕ್ರಮಗೊಳಿಸಲು ಸರ್ಕಾರ ನಿರ್ಧಾರ..! 4 ತಿಂಗಳೊಳಗೆ ಎಲ್ಲಾ ಅರ್ಜಿ ಇತ್ಯರ್ಥ..?

ಉಪ್ಪಿನಂಗಡಿ ಬಳಿ ರಿಕ್ಷಾ-ಎಟಿಎಂ ಹಣ ಸಾಗಿಸುವ ವಾಹನ ಡಿಕ್ಕಿ

ಅರಂತೋಡು: ಪ್ರತಿ ದಿನ ಬೆಳ್ ಬೆಳಗ್ಗೆ ವೈಎಂಕೆ ಹತ್ರ ಕರೆಂಟ್ ತಪ್ಪಿಸೋರು ಯಾರು..?ಅಕ್ರಮ ಮರಳು ಸಾಗಾಟದಾರರ ಕೈವಾಡದ ಶಂಕೆ, ಪೊಲೀಸ್ ಇಲಾಖೆ, ಗಣಿ ಇಲಾಖೆ ಈ ದಿವ್ಯ ಮೌನವೇಕೆ..?