ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆರಂಭವಾಗಿದೆ. ಶುಕ್ರವಾರ ಇಡೀ ದಿನ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಇಡೀ ದಿನ ಮಳೆಯಾಗಿದೆ. ಮಳೆದ ಅಬ್ಬರಕ್ಕೆ ರಾಜ ಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿದೆ. ದುರ್ಘಟನೆಯಲ್ಲಿ ಆಟೋ ಚಾಲಕ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಕೊಟ್ಟಾರ ನಿವಾಸಿ ದೀಪಕ್ ಆಚಾರ್ಯ (44 ವರ್ಷ) ಎಂದು ತಿಳಿದು ಬಂದಿದೆ. ಅವರ ಮೃತ ದೇಹವು ಕಾಲುವೆಯಲ್ಲಿ ಪತ್ತೆಯಾಗಿದೆ. ಕೊಟ್ಟಾರ ಪ್ರದೇಶದಲ್ಲಿ ಮಳೆ ನೀರಿನಿಂದಾಗಿ ಕಾಲುವೆ ಉಕ್ಕಿ ಹರಿದಿತ್ತು. ನೀರು ರಸ್ತೆಯ ಮೇಲೂ ಹರಿಯುತ್ತಿದ್ದ ವೇಳೆ ದೀಪಕ್ ಅವರ ರಿಕ್ಷಾ ಕಾಲುವೆಗೆ ಉರುಳಿತ್ತು ಎಂದು ಸ್ಥಳೀಯ ಪಾಲಿಕೆ ಸದಸ್ಯ ಮನೋಜ್ ಕುಮಾರ್ ತಿಳಿಸಿದ್ದಾರೆ.
- +91 73497 60202
- [email protected]
- October 6, 2024 9:34 PM