ಗುತ್ತಿಗಾರು: ಇಲ್ಲಿನ ಮೇಲಿನ ಪೇಟೆಯಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಶಿವ ಪಾರೆಪ್ಪಾಡಿ ಮತ್ತು ಚಿನ್ನಪ್ಪ ಕುಚ್ಚಾಲ ಅವರನ್ನು ಸುಳ್ಯ ಆಸ್ಪತ್ರೆಗೆ ತಲುಪಿಸುವ ಮುಖಾಂತರ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಆಂಬುಲೆನ್ಸ್ ಸೇವೆ ಪ್ರಾರಂಭ ಮಾಡಿತು. ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಯುವ ಉದ್ಯಮಿ ದುರ್ಗೇಶ್ ಪಾರೆಪ್ಪಾಡಿ ಮಾನವೀಯತೆ ಮೆರೆದು ಆಂಬುಲೆನ್ಸ್ ನ ಸೇವಾ ವೆಚ್ಚವನ್ನು ಗಾಯಾಳು ಸುಳ್ಯಕ್ಕೆ ಆಸ್ಪತ್ರೆಗೆ ತಲುಪುವ ಮೊದಲೇ ಟ್ರಸ್ಟ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಮಾದರಿಯಾದರು. ಆಂಬುಲೆನ್ಸ್ ಇನ್ನೂ ಲೋಕಾರ್ಪಣೆ ಆಗಿರಲಿಲ್ಲ. ಹೀಗಿದ್ದರೂ ತುರ್ತು ಸಂದರ್ಭದಲ್ಲಿ ಸೇವೆ ಆರಂಭ ಮಾಡಿರುವುದು ವಿಶೇಷ.
- +91 73497 60202
- [email protected]
- September 20, 2024 10:09 AM