ನ್ಯೂಸ್ ನಾಟೌಟ್ : ಸುಳ್ಯ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಜೋರಾಗಿದೆ.ಅದರಲ್ಲೂ ಅಲ್ಲಲ್ಲಿ ಚಿರತೆಗಳ ಪ್ರತ್ಯಕ್ಷವಾಗುತ್ತಿದೆ.ಈ ಹಿಂದೆ ಸಂಪಾಜೆ,ಪೆರುವಾಜೆ,ಅಜ್ಜಾವರ ಭಾಗದಲ್ಲಿ ಚಿರತೆಗಳು ನಾಯಿಗಳನ್ನು ಎಳೆದೊಯ್ಯಲು ಪ್ರಯತ್ನ ಮಾಡುತ್ತಿದ್ದ ಘಟನೆ ವರದಿಯಾಗಿತ್ತು.ಇದೀಗ ದೊಡ್ಡತೋಟ-ಮರ್ಕಂಜ ವ್ಯಾಪ್ತಿಯಲ್ಲಿಯೂ ಚಿರತೆಯೊಂದು ರಿಕ್ಷಾ ಚಾಲಕರೊಬ್ಬರಿಗೆ ಕಾಣ ಸಿಕ್ಕಿದೆ ಅನ್ನೋದರ ಬಗ್ಗೆ ವರದಿಯಾಗಿದೆ.
ಡಿ.18ರಂದು ರಾತ್ರಿ ಸುಮಾರು 8 ಗಂಟೆ ಆಸು ಪಾಸು ಆಗಿರಬಹುದು.ಈ ವೇಳೆ ರಿಕ್ಷಾ ಚಾಲಕರು ಬಾಡಿಗೆಗೆಂದು ತೆರಳುತ್ತಿದ್ದಾಗ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆಯು ಕಾಡಿನಿಂದ ರಸ್ತೆಗೆ ದಾಟಿದೆ. ಮಾತ್ರವಲ್ಲ ಬೊಳ್ಳಾಜೆ ಕಡೆಯ ಕಾಡಿಗೆ ಹೋಗಿದೆಯೆಂದು ರಿಕ್ಷಾ ಚಾಲಕರೊಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.ಕಾಡು ಪ್ರಾಣಿಗಳ ಹಾವಳಿಯಿಂದ ಮೊದಲೇ ಆತಂಕಗೊಂಡಿದ್ದ ಜನ ಇದೀಗ ಚಿರತೆ ಪ್ರತ್ಯಕ್ಷವಾಗಿರೋದ್ರ ಸುದ್ದಿ ಕೇಳಿ ಹೆಚ್ಚು ಭಯಭೀತರಾಗಿದ್ದಾರೆ.
ಇದೀಗ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಸಿಸಿ ಟಿವಿ ಅಳವಡಿಸಿ ಚಿರತೆಯ ಚಲನಾವಲನ ಗಮನಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.