ಕರಾವಳಿ

ರಾಜ್ಯ ಮಟ್ಟದ ಚುಂಚಾದ್ರಿ ಕ್ರೀಡೋತ್ಸವ: ಜಗದ್ಗುರು ಶ್ರೀ ನಿರ್ಮಲನಂದನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ

41
Spread the love

ನ್ಯೂಸ್ ನಾಟೌಟ್: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ವತಿಯಿಂದ 26ನೇ ರಾಜ್ಯ ಮಟ್ಟದ ಚುಂಚಾದ್ರಿ ಕೀಡೋತ್ಸವ ಅದ್ಧೂರಿಯಿಂದ ಶ್ರೀ ಆದಿಚುಂಚನಗಿರಿಯಲ್ಲಿ ನಡೆಯುತ್ತಿದೆ.

ಈ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡರು. ಆದಿಚುಂಚನಗಿರಿ ಜಗದ್ಗುರು ಶ್ರೀ ನಿರ್ಮಲನಂದನಾಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಕೂಟ ನಡೆಯುತ್ತಿದೆ. ಇದೇ ವೇಳೆ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶ್ರೀಗಳು ಆಶೀರ್ವಚನ ನೀಡಿದರು. ಆದಿಚುಂಚನ ಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಎಲ್ಲ ಸ್ವಾಮೀಜಿಗಳು ಉಪಸ್ಥಿತಿ ವಹಿಸಿದ್ದರು. ರಾಜ್ಯದೆಲ್ಲೆಡೆ ಇರುವ ಆದಿಚುಂಚನ ಗಿರಿ ಶಿಕ್ಷಣ ಟ್ರಸ್ಟ್ ಗೆ ಸಂಬಂಧಪಟ್ಟ ಎಲ್ಲ ಜಿಲ್ಲೆಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಶನಿವಾರ ಡಿಸೆಂಬರ್ 2ರಂದು ಕ್ರೀಡಾಕೂಟದ ಅಂತಿಮ ದಿನವಾಗಿದ್ದು ಕೂಟಕ್ಕೆ ತೆರೆ ಬೀಳಲಿದೆ.

See also  ನಾಳೆ ಮುಂಬೈನಲ್ಲಿ 'ಮಕ್ಕರ್ ತಂಡ'ದಿಂದ ಕಾಮಿಡಿ ಶೋ,ಅಮರ ತರಂಗ ತಂಡದ ಇಬ್ಬರು ಸದಸ್ಯರು ಭಾಗಿ
  Ad Widget   Ad Widget   Ad Widget   Ad Widget