ನ್ಯೂಸ್ ನಾಟೌಟ್: ಹುಡುಗಿಯೊಂದಿಗೆ ಸಂಬಂಧವಿದೆಯೆಂದು ಆರೋಪಿಸಿ ಹಲ್ಲೆ ನಡೆಸಿದ ಕಾರಣದಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವರದಿಯಾಗಿದೆ. ಆತ್ಮ ಹತ್ಯೆಗೆ ಪ್ರಯತ್ನ ಪಟ್ಟ ಯುವಕ ಲೈವ್ ಆಗಿ ವಿಡಿಯೋ ಮಾಡಿಕೊಂಡೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಬ್ಯಾರಿ ಭಾಷೆಯಲ್ಲಿ ಲೈವ್ ವೀಡಿಯೋ ಮಾಡಿದ್ದಾನೆ. ಲೈವ್ ವೀಡಿಯೋ ಮಾಡಿಕೊಂಡು ನೇಣಿಗೆ ಶರಣಾಗುತ್ತೇನೆ ಎಂದಿದ್ದ ನಾಸಿರ್. ಬಳಿಕ ನೇಣಿಗೆ ಶರಣಾಗದೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ತನ್ನ ಈ ಸ್ಥಿತಿಗೆ ಕಾರಣ ಏನು ಅನ್ನುವುದನ್ನೂ ಕೂಡ ನಾಸಿರ್ ವಿಡಿಯೋದಲ್ಲಿ ತಿಳಿಸಿದ್ದಾನೆ. ಆತ ಹೇಳಿರುವ ಪ್ರಕಾರ ಅದ್ರಾಮ ಅನ್ನುವವರ ಮನೆಯಲ್ಲಿ ನಾಸಿರ್ ಕಾರು ಚಾಲಕನಾಗಿದ್ದ. ಈ ವೇಳೆ ಅಲ್ಲಿನ ಕುಟುಂಬದೊಂದಿಗೆ ಸಂಬಂಧ ಇದೆಯೆಂದು ನಾಸಿರ್ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ನನಗೂ ಆ ಹುಡುಗಿಗೂ ಯಾವುದೇ ಸಂಬಂಧವಿಲ್ಲ. ಆದರೂ ವಿನಾಕಾರಣ ನನ್ನನ್ನು ಅಪರಾಧಿಯೆಂದು ಭಾವಿಸಿ ಮನೆಗೆ ಕರೆದು ಹಲ್ಲೆ ನಡೆಸಿದ್ದಾರೆ. ಮನಸ್ಸಿಗೆ ತುಂಬಾ ನೋವಾಗಿದೆ.
ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ. ನಾನು ಈಗ ಪುತ್ತೂರಿಗೆ ಹೋಗಿ ಆತ್ಮಹತ್ಯೆ ಮಾಡುತ್ತೇನೆಂದು ವಿಡಿಯೋದಲ್ಲಿ ಹೇಳಿ ಕಟ್ ಮಾಡಿದ್ದಾನೆ. ನಾಸಿರ್ ನೇಣಿಗೆ ಶರಣಾಗದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಯುವಕ ನಾಸಿರ್ ಸ್ಥಿತಿ ಚಿಂತಾಜನಕವಾಗಿದೆ.