ನ್ಯೂಸ್ ನಾಟೌಟ್: ಧಾರಾವಾಹಿ ಶೂಟಿಂಗ್ ನಡೆಯುತ್ತಿತ್ತು.ಈ ಶೂಟಿಂಗ್ ಸೆಟ್ನಲ್ಲಿ 200ಕ್ಕೂ ಅಧಿಕ ಜನರಿದ್ದರು. ಆದರೆ, ಕೆಲಸ ಮಾಡುತ್ತಿದ್ದ ಎಲ್ಲರೂ ಒಂದು ಹಂತದಲ್ಲಿ ಭಯದಿಂದ ಓಡಲು ಆರಂಭಿಸಿದ್ದರು! ಇಡೀ ಶೂಟಿಂಗ್ ಸೆಟ್ನಲ್ಲೇ ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಆ ಶೂಟಿಂಗ್ ಸೆಟ್ಗೆ ಅಚಾನಕ್ ಆಗಿ ಚಿರತೆ ಬಂದಿತ್ತು. ಈ ಘಟನೆ ಮುಂಬೈನ ಗೋರೆಗಾಂವ್ನಲ್ಲಿ ಗುರುವಾರ ನಡೆದಿದೆ.
ಮುಂಬೈನ ಫಿಲಂ ಸಿಟಿಯಲ್ಲಿ ಮರಾಠಿ ಟಿವಿ ಧಾರಾವಾಹಿ ‘ಸುಖ್ ಮ್ಹಣ್ಜೆ ನಕ್ಕಿ ಕೇ ಆಸ್ತಾ’ ಶೂಟಿಂಗ್ ನಡೆಯುತ್ತಿತ್ತು. ಈ ಶೂಟಿಂಗ್ ಸೆಟ್ನಲ್ಲಿ 200ಕ್ಕೂ ಅಧಿಕ ಜನರಿದ್ದರು. ಆಗ ಅಲ್ಲಿಗೆ ಚಿರತೆ ಮರಿ ಎಂಟ್ರಿ ಕೊಟ್ಟಿದ್ದರಿಂದ ಸಹಜವಾಗಿಯೇ ಇವರೆಲ್ಲಾ ಭಯಗೊಂಡಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾತನಾಡಿರುವ ಅಖಿಲ ಭಾರತೀಯ ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ, ಸೆಟ್ನಲ್ಲಿ 200ಕ್ಕೂ ಹೆಚ್ಚು ಜನರು ಹಾಜರಿದ್ದರು, ಯಾರಾದರೂ ಪ್ರಾಣ ಕಳೆದುಕೊಳ್ಳಬಹುದು.
ಫಿಲಂ ಸಿಟಿಯಲ್ಲಿ ನಿತ್ಯವೂ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದರೂ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕಳೆದ 10 ದಿನಗಳಲ್ಲಿ ಇದು ಮೂರನೇ ಪ್ರಕರಣವಾಗಿದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದೂ ಇವರು ಮನವಿ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ಯಾರಿಗೂ ಅಪಾಯವಾಗಿಲ್ಲ, ಅದು ಅಲ್ಲಿಂದ ಕಾಡು ದಾರಿಯಲ್ಲಿ ಹೋಗಿದೆ ಎಂದು ವರದಿ ತಿಳಿಸಿದೆ.