ನ್ಯೂಸ್ ನಾಟೌಟ್ : ಹಲವು ದಿನಗಳಿಂದ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಜೆಡಿಎಸ್ ಬಿಜೆಪಿ ಕಡೆ ತೋರುತ್ತಿರುವ ಒಲವು ಇರುವುದು ಇತ್ತೀಚೆಗೆ ವಿಪಕ್ಷಗಳ ಕಾಂಗ್ರೆಸ್ ಸಭೆಯ ವೇಳೆ ಅದಕ್ಕೆ ಜೆಡಿಎಸ್ ಹಾಜರಾಗದೆ ಬಹಿರಂಗಗೊಂಡಿತ್ತು. ಈಗ ಅದಕ್ಕೆ ಪುಷ್ಠಿ ಕೊಡುವ ಮತ್ತೊಂದು ಬೆಳವಣೆಗೆ ನಡೆದಿತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸದನದೊಳಗಿನ ಅಸಭ್ಯ ವರ್ತನೆಗೆ ರಾಜ್ಯ ವಿಧಾನಸಭೆಯಲ್ಲಿ ಬುಧವಾರ 10 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿ ಆದೇಶಿಸಲಾಗಿದ್ದು , ಪ್ರತಿಭಟಿಸುತ್ತಿದ್ದ ಬಿಜೆಪಿ ಸದಸ್ಯರನ್ನು ಅಲ್ಲಿನ ರಕ್ಷಣಾ ಪಡೆ ಎತ್ತಿ ಹೊರಗೆ ಹಾಕಿದ್ದು ಮತ್ತು ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು.
ಭಾರತೀಯ ಜನತಾ ಪಕ್ಷದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ ವೇಳೆ ಜೆಡಿಎಸ್ ಕೂಡಾ ಬೆಂಬಲ ನೀಡಿದೆ.
ಆದರೆ, ವಿಶೇಷವೆಂದರೆ ಬಿಜೆಪಿಯ ಲೆಟರ್ ಹೆಡ್ನಲ್ಲಿ ನೀಡಲಾಗಿರುವ ಈ ದೂರಿನಲ್ಲಿ ಮೊದಲ ಸಹಿ ಇರುವುದೇ ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಎಚ್.ಡಿ ಕುಮಾರಸ್ವಾಮಿ ಅವರದ್ದು. ಹಾಗಿದ್ದರೆ ಕುಮಾರಸ್ವಾಮಿ ಅವರು ಬಿಜೆಪಿ ಸೇರಿದರಾ ಅದರಲ್ಲೂ ಮೊದಲ ಸಹಿ ಇರಬೇಕಾದದ್ದು ವಿಪಕ್ಷ ನಾಯಕನದ್ದು, ಬಿಜೆಪಿ ಹೆಚ್ ಡಿಕೆ ಗೆ ವಿಪಕ್ಷ ನಾಯಕ ಸ್ಥಾನ ಬಿಟ್ಟು ಕೊಡಲಿದೆಯಾ ಎಂಬ ಚರ್ಚೆಗಳು ಜೋರಾಗಿವೆ.
ಬಿಜೆಪಿಯ 10 ಶಾಸಕರ ಅಮಾನತು ಆದ ಮೇಲೆ ಜೆಡಿಎಸ್ ಕೂಡ ಅದನ್ನು ವಿರೋಧಿಸಿದೆ. ಇದಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್ಗಳು ಸೇರಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಗುರುವಾರ ಬೆಳಗ್ಗೆ ಗಾಂಧಿ ಪ್ರತಿಮೆಯ ಮುಂದೆ ಬಿಜೆಪಿಯ ಪ್ರತಿಭಟನೆ ನಡೆದಿತ್ತು. ಅಲ್ಲಿಗೆ ಆಗಮಿಸಿದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಬೆಂಬಲ ಸಾರಿದರು. ಇದಾದ ಬಳಿಕ ಅವರೆಲ್ಲರೂ ಜತೆಯಾಗಿ ರಾಜಭವನಕ್ಕೆ ತೆರಳಿದರು. ಅಲ್ಲಿ ಬಿಜೆಪಿ ಶಾಸಕರ ಜತೆಗೆ ನಿಂತುಕೊಂಡೇ ಎಚ್.ಡಿ ಕುಮಾರಸ್ವಾಮಿ ಅವರು ಕೂಡಾ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಬೆಳವಣಿಗೆಗಳು ಹಲವರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.