ನ್ಯೂಸ್ ನಾಟೌಟ್: ಕುಬೇರ ಮಿತ್ರ ನಿಧಿ ಲಿಮಿಟೆಡ್ನ ನೂತನ ಶಾಖೆ ಸ್ಥಳಾಂತರಗೊಂಡು ಸುಳ್ಯದ ಶ್ರೀ ರಾಂ ಪೇಟೆಯಲ್ಲಿ ಶನಿವಾರ (ಜು.15 ರಂದು) ಶುಭಾರಂಭಗೊಂಡಿದೆ. ಈ ಪ್ರಯುಕ್ತ ನೂತನ ಶಾಖೆಯಲ್ಲಿ ಗಣಹೋಮ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಡಿವಿಶನ್ ಮ್ಯಾನೆಜರ್ ವೀರೇಶ್ , ಅಲಂಗಾರ್ , ಡಿವಿಶನ್ ಮ್ಯಾನೆಜರ್ ಪೂವಪ್ಪ ಡಿ, ಸುಳ್ಯ ಬ್ರಾಂಚ್ ಮ್ಯಾನೆಜರ್ ಕೌಶಿಕ್ , ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಕೊಡಗು, ದಕ್ಷಿಣಕನ್ನಡದಲ್ಲಿ ಒಟ್ಟು 11 ಶಾಖೆಗಳನ್ನು ಹೊಂದಿದ್ದು , ಜನಸ್ನೇಹಿಯಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕುಬೇರಮಿತ್ರ ನಿಧಿ ಲಿಮಿಟೆಡ್ ಕಂಪೆನಿ ಕಾಯ್ದೆ 2013ರ ಅಡಿಯಲ್ಲಿ ಮಾನ್ಯತೆ ಪಡೆದ ಎನ್.ಬಿ.ಎಫ್.ಸಿ. ಸಂಸ್ಥೆಯಾಗಿದ್ದು, ಸಾಂಪ್ರದಾಯದ ಬ್ಯಾಂಕಿಂಗ್ ಹಾಗೂ ಹಣಕಾಸು ಸಂಬಂಧಿತ ಸೇವೆಗಳನ್ನು ನೀಡುತ್ತದೆ. ಆರ್.ಬಿ.ಐ. ನ ಮಾರ್ಗಸೂಚಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಆದ್ಯತಾ ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದು, ನಮ್ಮ ಎಲ್ಲಾ ಗ್ರಾಹಕರಿಗೆ ಮತ್ತು ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿ ದರ ನೀಡಲಾಗುವುದು. ಸ್ಥಳೀಯ ಆರ್ಥಿಕತೆಗೆ ಉತ್ತೇಜನ, ವಿವಾದ ಮುಕ್ತ ವಹಿವಾಟು ನಡೆಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ.
ಉಳಿತಾಯ ಖಾತೆ, ಮರುಕಳಿಸುವ ಠೇವಣಿ, ಸ್ಥಿರ ಠೇವಣಿ, ದೈನಂದಿನ ಠೇವಣಿ ಯೋಜನೆ
ವಾಹನ ಸಾಲ, ಗೃಹಸಾಲ, ವೈಯಕ್ತಿಕ ಸಾಲ, ಅಡಮಾನ ಸಾಲ, ಚಿನ್ನದ ಸಾಲ ಹಾಗೂ ಪಿಗ್ಮಿ ಕಲೆಕ್ಷನ್ ಸೇವೆಯಿದೆ. ಹೆಚ್ಚಿನ ವಿವರಗಳಿಗೆ :9591358376 , 9591358376 ಸಂಪರ್ಕಿಸಿ.