ನ್ಯೂಸ್ ನಾಟೌಟ್ : ಮಾದಕ ವಸ್ತುಗಳಾದ ಗಾಂಜವನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ವಿರಾಜಪೇಟೆ ಅಬಕಾರಿ ಇಲಾಖೆಯ ಕಾರ್ಯಾಚರಣೆ ಮೂಲಕ ಏಪ್ರಿಲ್ ೧೬ ಭಾನುವಾರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಕಾರ್ಮಾಡು ಚೆಕ್ ಪೋಸ್ಟ್ನಲ್ಲಿ ಚುನಾವಣಾ ಕರ್ತವ್ಯದ್ದ ಪೊಲೀಸರು ಕಾರೊಂದನ್ನು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಬಂಧಿತ ಆರೋಪಿಗಳನ್ನು ತಮಪ್ಪ ಸರ್ಕಾರ್ , ಬೀಬವ್, ದೇವಾಂಸ್ ಶರ್ಮಾ ಹಾಗೂ ಆದಿತ್ಯ ಎಂದು ತಿಳಿದುಬಂದಿದೆ.
ಆರೋಪಿಗಳು ಗಾಂಜ ಸೇವನೆ ಮಾಡಿದಲ್ಲದೆ, 10 ಗ್ರಾಂ ಚರಸ್ , 35 ಗ್ರಾಂ ಗಾಂಜಾ ಇರಿಸಿಕೊಂಡಿದ್ದರು, ವಿರಾಜ ಪೇಟೆ ಉಪ ವಿಭಾಗ ಕಛೇರಿಯ ಅಬಕಾರಿ ಉಪಅಧೀಕ್ಷಕ ಎಂ.ಎನ್.ನಟರಾಜು, ಸಿಬ್ಬಂದಿಗಳಾದ ಎನ್.ಜಿ. ಮದನ್ ಕುಮಾರ್, ಸಂತೋಷ್, ಚಾಲಕ ದರ್ಶನ್ ,ಪೊಲೀಸ್ ಸಿಬ್ಬಂದಿ ಸಂತೋಷ್ ಕುಮಾರ್ , ಅರಣ್ಯ ಇಲಾಖಾ ಸಿಬ್ಬಂದಿ ಉದಯಕುಮಾರ್ ಮತ್ತಿತ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿ ತಿಳಿಸಿದೆ.