ನ್ಯೂಸ್ ನಾಟೌಟ್ : ಕಾಂತಾರ ಸಿನಿಮಾದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಶ್ರೀ ಕ್ಷೇತ್ರ ಮುಗುಳಖೋಡ ಮಠದಿಂದ ಕೊಡಮಾಡುವ ಪ್ರಸ್ತಕ ಸಾಲಿನ ಸಿದ್ದಶ್ರೀ ರಾಷ್ಟೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಂತಾರ ಸಿನಿಮಾವು ತುಳು ನಾಡಿನ ಮಹಿಮೆಯನ್ನು ಹಾಗೂ ದೈವಾರಾಧನೆಯ ಪ್ರತೀಕವನ್ನು , ಅಲ್ಲದೇ ಜನರಲಲ್ಲಿ ಭಯ, ಭಕ್ತಿಯನ್ನು ಮೂಡಿಸುವ ಅದ್ಬುತ ಚಿತ್ರವಾಗಿದೆ. ದೇಶ- ವಿದೇಶಾದ್ಯಂತ ಜನರ ಗಮನ ಸೆಳೆದಿದೆ. ಇದೀಗ ರಿಷಬ್ ಶೆಟ್ಟಿಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶೀ ಕ್ಷೇತ್ರ ಮುಗುಳಖೋಡ ಮಠದಿಂದ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಅರ್ಹರಾಗಿದ್ದು , ಪ್ರಶಸ್ತಿಯಲ್ಲಿ ೧ ಲಕ್ಷ ನಗದು, ಪದಕ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ. ಶ್ರೀ ಮುರುಘ ರಾಜೇಂದ್ರ ಮಹಾ ಉಪಯೋಗಿಗಳ ೩೮ ನೇ ವಂದನಾ ಕಾರ್ಯಕ್ರಮದಲ್ಲಿ, ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮಠದ ಆಡಳಿತ ಮಂಡಳಿ ತಿಳಿಸಿವೆ.