ನ್ಯೂಸ್ ನಾಟೌಟ್: ಹಠವೊಂದಿದ್ದರೆ ಬದುಕಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಎಂತಹ ಸವಾಲನ್ನೂ ಮೀರಿ ನಿಲ್ಲಬಹುದು. ದೇವರ ಆಶೀರ್ವಾದವಿದ್ದರೆ ಯಾವ ಕೆಲಸವೂ ಕಷ್ಟಸಾಧ್ಯವಲ್ಲ ಅನ್ನುವುದನ್ನು ಭಕ್ತರೊಬ್ಬರು ನಿರೂಪಿಸಿ ತೋರಿಸಿದ್ದಾರೆ.
ಬೆಂಗಳೂರಿನ ಭಕ್ತರಾಗಿರುವ ಸುಬ್ರಹ್ಮಣ್ಯ ದೀಕ್ಷಿತ್ ಅವರು ಓಂ ನಮಃ ಶಿವಾಯ ಅಕ್ಷರ ಲಕ್ಷ ಲೇಖನ ಯಜ್ಞ ಎಂಟು ಲಕ್ಷಕ್ಕೂ ಅಧಿಕ ಸಲ ಬರೆದಿದ್ದಾರೆ. ಶಿವ ಪಂಚಾಕ್ಷರಿ ಹವನದೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದದ ಬಸವೇಶ್ವರನ ಸನ್ನಿಧಿಗೆ ಸಮರ್ಪಣೆ ಮಾಡಿದ್ದಾರೆ. ಮೂರು ವರ್ಷಗಳಿಂದ ನಿರಂತರ ಪ್ರಯತ್ನದ ಮೂಲಕ ಈ ಸಾಧನೆ ಮಾಡಿರುವುದು ವಿಶೇಷ.













