ನ್ಯೂಸ್ ನಾಟೌಟ್: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯ ಆಪ್ತ ಸಹಾಯಕರಾಗಿದ್ದ ಪ್ರಕಾಶ್ ಶಾ, ತಮ್ಮ ಉನ್ನತ ಹುದ್ದೆ ಮತ್ತು 75 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸನ್ಯಾಸಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ವ್ಯವಹಾರ ಕೌಶಲ್ಯ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾದ ಶಾ ಮತ್ತು ಅವರ ಪತ್ನಿ ನೈನ್ ಶಾ ಜೈನ ಧರ್ಮದಂತೆ ಮಹಾವೀರ ಜಯಂತಿಯಂದು ದೀಕ್ಷೆ ತೆಗೆದುಕೊಳ್ಳುವ ಮೂಲಕ ಶಾಂತಿ ಮತ್ತು ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸಿದ್ದಾರೆ.
ಪ್ರಕಾಶ್ ಷಾ ರಿಲಯನ್ಸ್ ನಲ್ಲಿ ಉಪಾಧ್ಯಕ್ಷರಾಗಿದ್ದರು. ಕಂಪೆನಿಯ ಪ್ರಮುಖ ನಿರ್ಧಾರಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಯಶಸ್ವಿ ವೃತ್ತಿಜೀವನ ಮತ್ತು ಲೌಕಿಕ ಜೀವನವನ್ನು ತ್ಯಜಿಸುವ ಅವರ ಆಯ್ಕೆಯು ಅನೇಕರನ್ನು ಅಚ್ಚರಿಗೊಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅವರ ಫೋಟೋಗಳು, ಪ್ರಕಾಶ್ ಶಾ ಸರಳವಾದ ಬಿಳಿ ನಿಲುವಂಗಿಯನ್ನು ಧರಿಸಿ, ಕೆಲವೇ ವಸ್ತುಗಳೊಂದಿಗೆ ಬರಿಗಾಲಿನಲ್ಲಿ ನಡೆಯುವುದನ್ನು ತೋರಿಸುತ್ತವೆ.
ಪ್ರಕಾಶ್ ಶಾ ಬ್ರಹ್ಮಚರ್ಯದ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಎಲ್ಲಾ ಭೌತಿಕ ಸವಲತ್ತುಗಳನ್ನು ತ್ಯಜಿಸಿದ್ದಾರೆ. ಈಗ, ಅವರು ಸರಳ ನಿರ್ಲಿಪ್ತ ಪರೋಪಕಾರದಲ್ಲಿ ತೊಡಗಿಕೊಳ್ಳುವ ಸೇವೆಯ ಜೀವನವನ್ನು ಅನುಸರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸುವ ಪ್ರಕಾಶ್ ಷಾ ಅವರ ನಿರ್ಧಾರವು ರಾತ್ರೋರಾತ್ರಿ ಸಂಭವಿಸಲಿಲ್ಲ. ಅವರಿಗೆ ಜೈನ ತತ್ವಶಾಸ್ತ್ರ ಮತ್ತು ಆಧ್ಯಾತ್ಮದಲ್ಲಿ ಹಲವು ವರ್ಷಗಳ ಕಾಲ ಆಳವಾದ ಆಸಕ್ತಿ ಇತ್ತು ಎಂದು ಅವರ ಆಪ್ತರು ಹೇಳುತ್ತಾರೆ. ಕಾಲಾನಂತರದಲ್ಲಿ, ಆಧ್ಯಾತ್ಮದೆಡೆಗಿನ ಅವರ ಒಲವು ಬಲವಾಯಿತು. ಆ ಮೂಲಕ ಕಷ್ಟಪಟ್ಟು ಗಳಿಸಿದ ಲೌಕಿಕ ಜೀವನದ ಸವಲತ್ತುಗಳನ್ನು ತ್ಯಜಿಸಿದರು ಎನ್ನಲಾಗಿದೆ.
ರಾತ್ರಿ ಗ್ರಾಮಸ್ಥರಿಗೆ ಮಹಿಳೆ ಜೊತೆ ಸಿಕ್ಕಿಬಿದ್ದ ಪ್ರಖ್ಯಾತ ಸ್ವಾಮೀಜಿ..! ಮಠ ಬಿಟ್ಟು ಸ್ವಾಮೀಜಿ ಪರಾರಿ..!
ಶೀಘ್ರದಲ್ಲೇ 8,000 ಪೊಲೀಸ್ ಪೇದೆ ಹುದ್ದೆಗಳ ಭರ್ತಿಗೆ ತಯಾರಿ, ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ