ನ್ಯೂಸ್ ನಾಟೌಟ್: ಮೈಸೂರಿನ ನಂಜನಗೂಡು ತಾಲೂಕಿನ ಕಕ್ಕನಹಟ್ಟಿ ಗ್ರಾಮದ ರೈತರೊಬ್ಬರು ತಮ್ಮ ಕೃಷಿ ಜಮೀನಿಗೆ ದೃಷ್ಟಿ ಆಗಬಾರದೆಂದು ಮಾಡಲ್ ಗಳ ಫೋಟೋಗಳನ್ನು ಅಳವಡಿಸಿದ್ದಾರೆ. ಇದು ದಾರಿಹೋಕರ ಗಮನ ಸೆಳೆಯುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಕ್ಕನಹಟ್ಟಿ ಗ್ರಾಮದ ರೈತ ಸೋಮೇಶ್ ಜಮೀನಿನಲ್ಲಿ ಮಾಡೆಲ್ ಗಳ ಫೋಟೋಗಳನ್ನು ಪ್ರತಿಷ್ಠಾಪಿಸಿದ್ದಾರೆ. ಮಾಡೆಲ್ ಗಳ ಫೋಟೋಗಳನ್ನ ತಮ್ಮ ಜಮೀನಿನ ಸುತ್ತ ಅಳವಡಿಸಿದ್ದಾರೆ.
ತನ್ನ ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್ ಗಳ ಫೋಟೋಗಳನ್ನ ಅಳವಡಿಸಿದ್ದಾನೆ. ಜಮೀನಿನ ಸುತ್ತ ಸುಮಾರು 10 ಸ್ಥಳಗಳಲ್ಲಿ ಮಾಡೆಲ್ಗಳ ಚಿತ್ರಗಳು ರಾರಾಜಿಸುತ್ತಿವೆ.
ಇದನ್ನೂ ಓದಿ: ಸಾಲು ಸಾಲಾಗಿ ಬೈಕ್ ಗಳಲ್ಲಿ ಲಾಂಗ್ ಹಿಡಿದು ಸವಾರಿ..! ಮಧ್ಯರಾತ್ರಿ ಮಾರಕಾಸ್ತ್ರಗಳ ಜೊತೆ ಬೈಕ್ ವ್ಹೀಲಿಂಗ್..!
ಸಾರ್ವಜನಿಕರು ಈ ಜಮೀನು ಸುತ್ತಮುತ್ತ ಹೋಗುವಾಗ ತೋಟದ ಬೆಳೆಗಳನ್ನು ನೋಡದೇ, ಅಲ್ಲಿ ಅಳವಡಿಸಿರುವ ಮಾಡೆಲ್ ಗಳನ್ನು ಕುಣ್ತುಂಬಿಕೊಂಡು ಹೋಗ್ತಿದ್ದಾರೆ. ಆ ಮೂಲಕ ಕೆಟ್ಟ ಕಣ್ಣುಗಳು ನನ್ನ ಬೆಳೆ ಮೇಲೆ ಬೀಳುತ್ತಿಲ್ಲ ಎಂದು ರೈತ ಸೋಮೇಶ್ ಹೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಇಂತಹ ಪ್ರಯತ್ನ ಕೆಲ ರೈತರು ಮಾಡಿದ ಬಗ್ಗೆ ವರದಿಯಾಗಿತ್ತು.