ಕ್ರೈಂದೇಶ-ವಿದೇಶವೈರಲ್ ನ್ಯೂಸ್

30ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ..!ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಆಸ್ಪತ್ರೆಗೆ ದಾಖಲು..!

149

ನ್ಯೂಸ್ ನಾಟೌಟ್: ಹುಚ್ಚು ನಾಯಿಯೊಂದು ಕಂಡ ಕಂಡವರನ್ನು ಕಚ್ಚಿ ಗಾಯಗೊಳಿಸಿದ್ದು ಒಟ್ಟು 16 ಜನರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಈ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಪ್ರದೇಶದಲ್ಲಿ ಸೋಮವಾರ(ಅ.29) ನಡೆದಿದೆ.

ಗೋಕುಲ ರೋಡ್ ​ನಲ್ಲಿ ಸೋಮವಾರ ಮಧ್ಯಾಹ್ನ 30ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿತ್ತು. ಈ ಪೈಕಿ 16ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರಿಗೆ ತೀವ್ರ ಗಾಯಗಳಾಗಿದ್ದು ರಕ್ತಸ್ರಾವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಕು ನಾಯಿಗೆ ಹುಚ್ಚು ಹಿಡಿದಿದ್ದರಿಂದ ಮಾಲೀಕರೇ ಅದನ್ನು ಹೊರಗೆ ಬಿಟ್ಟರೋ ಅಥವಾ ಅದೇ ತಪ್ಪಿಸಿಕೊಂಡು ಬಂತೋ. ಒಟ್ಟಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಒಬ್ಬರ ನಂತರ ಒಬ್ಬರಂತೆ 30ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಅಧಿಕಾರಿಗಳು ಸೋಮವಾರ ತಡರಾತ್ರಿ ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ನಾಯಿ ದಾಳಿಗೆ ಗುರಿಯಾದವರಲ್ಲಿ ಯುವಕರು, ಶಾಲಾ ಮಕ್ಕಳು, ಮಹಿಳೆಯರು, ಕಾರ್ಮಿಕರು ಮತ್ತು ವೃದ್ಧರು ಸೇರಿದ್ದಾರೆ. ರಕ್ತದಲ್ಲಿ ತೊಯ್ದ ಬಟ್ಟೆಯಲ್ಲಿ ಚಿಕಿತ್ಸೆಗಾಗಿ ಗಾಯಾಳುಗಳು ಆಸ್ಪತ್ರೆಗೆ ಆಗಮಿಸಿದ್ದು ಭೀಕರವಾಗಿತ್ತು. ಗಂಭೀರ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Click

https://newsnotout.com/2024/10/kannada-news-couples-are-ill-and-blind-son-nomore/
https://newsnotout.com/2024/10/marriagenvitation-card-get-viral-kannada-news-d/
https://newsnotout.com/2024/10/kerala-cm-pinray-vijayan-car-accid-lkannada-news-viral-video/
https://newsnotout.com/2024/10/kasaragod-150-temple-festival-cracker-issue-kannada-news-kerala/
https://newsnotout.com/2024/10/military-ambulance-kannada-news-boarder-viral-news-dog/
See also  ರಾತ್ರೋರಾತ್ರಿ ಪುತ್ತೂರಿನಲ್ಲಿ ಕಾಡಾನೆ ದಾಳಿ..! ಅಪಾರ ಬೆಳೆ ನಾಶ ಮಾಡಿದ್ದೆಲ್ಲಿ..? ಸ್ಥಳೀಯರಲ್ಲಿ ಆತಂಕ!
  Ad Widget   Ad Widget     Ad Widget   Ad Widget   Ad Widget   Ad Widget