ಕರಾವಳಿಕ್ರೈಂವೈರಲ್ ನ್ಯೂಸ್

ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ..! ಒಂದು ಮಗು ಮತ್ತು ತಂದೆಯ ಮೃತದೇಹ ಪತ್ತೆ..!

186

ನ್ಯೂಸ್ ನಾಟೌಟ್: ಮೂರು ಮಕ್ಕಳನ್ನು ತುಂಗಭದ್ರಾ ನದಿಗೆ ತಳ್ಳಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ಇಂದು(ನ.7) ನಡೆದಿದೆ.

ಗದಗದ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಎನ್‌ ಡಿಆರ್‌ಎಫ್‌ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

41 ವಯಸ್ಸಿನ ಮಂಜುನಾಥ್‌ ಹಾಗೂ ಆತನ ಮಗಳು‌ 5 ವರ್ಷದ ಧನ್ಯಾ ಶವ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನೋರ್ವ ಬಾಲಕ ಪವನ ಕುಮಾರ್‌ ಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮಂಜುನಾಥ್‌, ಮಕ್ಕಳಾದ ಧನ್ಯ, ಪವನ್‌ ಹಾಗೂ ಪತ್ನಿ ಮತ್ತು ಅಣ್ಣನ ಮಗ ವೇದಾಂತ್‌ ಅವರೊಂದಿಗೆ ನದಿಗೆ ಹಾರಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Click

https://newsnotout.com/2024/11/bengaluru-kannada-news-doctor-issue-with-patient-d/

See also  ಕೇರಳ ಸ್ಟೋರಿ ನಟಿ ಆದಾ ಶರ್ಮಾ ಆಸ್ಪತ್ರೆ ದಾಖಲು..! ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ! ಅಷ್ಟಕ್ಕೂ ನಟಿಗೇನಾಯ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget