ದಕ್ಷಿಣ ಕನ್ನಡರಾಜಕೀಯರಾಜ್ಯವೈರಲ್ ನ್ಯೂಸ್

25 ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಬೆನ್ನಲ್ಲೇ 21 ಐಎಎಸ್ ಅಧಿಕಾರಿಗಳೂ ಟ್ರಾನ್ಸ್ ಫರ್..! ಏನಿದು ಮೇಜರ್ ಸರ್ಜರಿ..?

158

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆ ಮುಗಿದ ಬಳಿಕ ಕರ್ನಾಟಕ ಸರ್ಕಾರದ ಆಡಳಿತ ವರ್ಗದಲ್ಲಿ ಬಹಳ ದೊಡ್ಡ​ ಬದಲಾವಣೆ ನಡೆಯುತ್ತಿದೆ, ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ, ಸರ್ಕಾರ 25 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ, ಕರ್ನಾಟಕ ಸರ್ಕಾರ (Karnataka Government) 21 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್​ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

ಅಧಿಕಾರಿಯ ಹೆಸರುಎಲ್ಲಿಂದಎಲ್ಲಿಗೆ
ಡಾ. ರಾಜೇಂದ್ರ ಕೆ.ವಿಮೈಸೂರು ಜಿಲ್ಲಾಧಿಕಾರಿಪ್ರವಾಸೋದ್ಯಮ ಇಲಾಖೆ ನಿರ್ದೇಶಕ
ಡಾ. ರಾಮ್‌ ಪ್ರಸಾದ್‌ ಮನೋಹರ್‌ಪ್ರವಾಸೋದ್ಯಮ ಇಲಾಖೆ ನಿರ್ದೇಶಕನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ
ನಿತೇಶ್‌ ಪಾಟೀಲ್‌ಬೆಳಗಾವಿ ಜಿಲ್ಲಾಧಿಕಾರಿಎಂಎಸ್‌ಎಂಇ ನಿರ್ದೇಶಕ
ಡಾ. ಅರುಂಧತಿ ಚಂದ್ರಶೇಖರ್‌ಖಜಾನೆ ಕಮಿಷನರ್‌ಪಂಚಾಯತ್‌ರಾಜ್‌ ಕಮಿಷನರ್‌
ಚಂದ್ರಶೇಖರ ನಾಯಕ ಎಲ್.‌ರಾಯಚೂರು ಜಿಲ್ಲಾಧಿಕಾರಿವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ
ವಿಜಯಮಹಾಂತೇಶ್‌ ಬಿ.ದಾನಮ್ಮನವರ್‌ಎಂಎಸ್‌ಎಂಇ ನಿರ್ದೇಶಕಹಾವೇರಿ ಜಿಲ್ಲಾಧಿಕಾರಿ
ಗೋವಿಂದ ರೆಡ್ಡಿಬೀದರ್‌ ಜಿಲ್ಲಾಧಿಕಾರಿಗದಗ ಜಿಲ್ಲಾಧಿಕಾರಿ
ರಘುನಂದನ್‌ ಮೂರ್ತಿಹಾವೇರಿ ಜಿಲ್ಲಾಧಿಕಾರಿಖಜಾನೆ ಆಯುಕ್ತ ಬೆಂಗಳೂರು
ಡಾ. ಗಂಗಾಧರಸ್ವಾಮಿಕೃಷಿ ಮಾರ್ಕೆಟಿಂಗ್‌ ನಿರ್ದೇಶಕದಾವಣಗೆರೆ ಜಿಲ್ಲಾಧಿಕಾರಿ
ಲಕ್ಷ್ಮೀಕಾಂತ ರೆಡ್ಡಿಕೆಯುಐಡಿಎಫ್‌ಸಿ ನಿರ್ವಹಣಾ ನಿರ್ದೇಶಕಮೈಸೂರು ಜಿಲ್ಲಾಧಿಕಾರಿ
ನಿತೀಶ್‌ ಕೆ.ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾಯಚೂರು ಜಿಲ್ಲಾಧಿಕಾರಿ
ಮೊಹಮ್ಮದ್‌ ರೋಶನ್‌ಹೆಸ್ಕಾಂ ನಿರ್ವಹಣಾ ನಿರ್ದೇಶಕಬೆಳಗಾವಿ ಜಿಲ್ಲಾಧಿಕಾರಿ
ಶಿಲ್ಪಾ ಶರ್ಮಾಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿಬೀದರ್‌ ಜಿಲ್ಲಾಧಿಕಾರಿ
ದಿಲೇಶ್‌ ಸಸಿಎಡಿಸಿಎಸ್‌ ನಿರ್ದೇಶಕಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು
ಲೋಖಂಡೆ ಸ್ನೇಹಲ್‌ ಸುಧಾಕರ್‌ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಸಿಇಒಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ
ಶ್ರೀರೂಪಾಕೆಎಸ್‌ಎಸ್‌ಆರ್‌ಡಿ ನಿರ್ದೇಶಕಿಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ
ಜಿಟ್ಟೆ ಮಾಧವ ವಿಠಲ ರಾವ್ಕಲಬುರಗಿ ಸಿಟಿ ಕಾರ್ಪೊರೇಶನ್‌ ಡಿಸಿಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌
ಹೇಮಂತ್‌ ಎನ್.‌ಬಳ್ಳಾರಿ ಹಿರಿಯ ಸಹಾಯಕ ಆಯುಕ್ತಶಿವಮೊಗ್ಗ ಜಿ.ಪಂ ಸಿಇಒ
ನೊಂಗ್ಲಜ್‌ ಮೊಹಮದ್‌ ಅಲಿ ಅಕ್ರಂ ಶಾಹಿರಿಯ ಸಹಾಯಕ ಆಯುಕ್ತಹೊಸಪೇಟೆ ವಿಜಯನಗರ ಜಿ.ಪಂ ಸಿಇಒ
ಜ್ಯೋತಿ ಕೆ.ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕ
ಶ್ರೀಧರ ಸಿ.ಎನ್‌ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕ
ಇದರ ಹಿಂದಿನ ನಿರ್ದಿಷ್ಟ ಕಾರಣ ಬಹಿರಂಗಗೊಂಡಿಲ್ಲ, ಕೆಲವು ರಾಜಕೀಯ ಕಾರಣಗಳಿಂದ ಈ ವರ್ಗಾವಣೆಗಳು ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ರಾಜ್ಯ ಆಡಳಿತ ಸುಧಾರಣೆಗಾಗಿ, ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿತ್ತು, ಈಗ ಐಎಎಸ್ ಅಧಿಕಾರಿಗಳನ್ನೂ ವರ್ಗಾವಣೆಗೊಳಿಸಿದೆ. ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.
See also  ಹೊಸ ವರ್ಷದಲ್ಲಿ ಚಿತ್ರರಂಗಕ್ಕೆ ದರ್ಶನ್ ಮರು ಎಂಟ್ರಿ..! ಇಂದು(ಜ.1) ‘ಡೆವಿಲ್‌’ ಸಿನಿಮಾದ ಡಬ್ಬಿಂಗ್‌..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget