ನ್ಯೂಸ್ ನಾಟೌಟ್: ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಇತ್ತೀಚೆಗೆ ಫೇಸ್ಬುಕ್ನಲ್ಲಿ ತಮ್ಮ ಹೊಸದೊಂದು ಪೋಸ್ಟ್ ಹಾಕಿದ್ರು. ಅದರಲ್ಲಿ ಕೆದರಿದ ಕೂದಲುಗಳನ್ನು ಬಿಟ್ಟು ವಿಚಿತ್ರವಾಗಿ ಕಾಣಿಸಿಕೊಂಡಿದ್ದರು.
ಕೆದರಿದ ಕೂದಲುಗಳನ್ನು ಬಿಟ್ಟು ಪೋಸ್ ಕೊಟ್ಟಿದ್ದ ಪ್ರತಾಪ್ ಸಿಂಹಗೆ ಅಭಿಮಾನಿಗಳು ಸಹಿತ ಅನೇಕ ಮಂದಿ ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ನೀವೊಬ್ಬ ಜನಪ್ರತಿನಿಧಿಯಾಗಿದ್ದವರು, ಸಭ್ಯವಾಗಿ ಇರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ಇದರ ಜೊತೆಗೆ ಅವರ ಆಪ್ತರೂ ಆಗಿರುವ ಕೇಂದ್ರ ಸಚಿವರೊಬ್ಬರು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಕೊನೆಗೂ ಪ್ರತಾಪ್ ಸಿಂಹ ತನ್ನ ಕೂದಲು ಕತ್ತಿರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, ಕೇಂದ್ರ ಸಚಿವರು ಹಾಗೂ ಹಿರಿಯಣ್ಣನಂತೆ ನನ್ನನ್ನು ಸಲುಹುವ ವಿ. ಸೋಮಣ್ಣ ಸಾಹೇಬರ ಗದರಿಕೆಗೆ ಅಂಜಿ ಹೇರ್ ಕಟ್ ಮಾಡಿಸಿದ್ದೇನೆ ಮತ್ತು ನಿಮ್ಮ ಬೈಗುಳದಿಂದಲೂ ತಪ್ಪಿಸಿಕೊಳ್ಳುತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ನಲ್ಲಿ ತಮ್ಮ ನ್ಯೂ ಹೇರ್ಸ್ಟೈಲ್ನ ಕೆಲವೊಂದು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಕೆದರಿದ ಕೂದಲುಗಳನ್ನು ಬಿಟ್ಟು ಪೋಸ್ ಕೊಟ್ಟಿದ್ದ ಫೋಟೋದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ‘ಬೈಬೇಡ್ರೋ… ಹುಣಸೂರು ಆದಿವಾಸಿ ಹೇರ್ ಆಯಿಲ್ ಜಾಹಿರಾತು!’ ಎಂದು ಕ್ಯಾಪ್ಶನ್ ಕೊಟ್ಟಿದ್ದರು.