ಬೈಯುತ್ತಿದ್ದ ಯಜಮಾನನಿಗೆ ಚಪಾತಿ ಹಿಟ್ಟಿಗೆ ಮೂತ್ರ ಬೆರೆಸಿ ಅಡುಗೆ ಮಾಡುತ್ತಿದ್ದ ಮನೆಕೆಲಸದಾಕೆ..! ಕುಟುಂಬಸ್ಥರಿಗೆ ಅನಾರೋಗ್ಯ ಕಾಡಿದಾಗಲೇ ನೀಚ ಕೃತ್ಯ ಬಯಲಿಗೆ..!

ನ್ಯೂಸ್ ನಾಟೌಟ್: ಎಷ್ಟೇ ಕೆಲಸ ಮಾಡಿದರೂ ತಾನು ಕೆಲಸ ಮಾಡುತ್ತಿದ್ದ ಮನೆಯವರು ಬೈಯುತ್ತಿದ್ದರು ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ಮನೆ ಕೆಲಸದಾಕೆ ಚಪಾತಿ ಹಿಟ್ಟಿನಲ್ಲಿ ಮೂತ್ರ ಬೆರೆಸಿ ತಿನ್ನಿಸಿದ ನೀಚ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. View this post on Instagram A post shared by 𝘼𝙐𝙍𝘼𝙉𝙂𝘼𝘽𝘼𝘿 𝙏𝙄𝙈𝙀𝙎™ (@aurangabadtimes) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೀನಾ (32) ಎಂಬ ಅಡುಗೆ ಮನೆ ಕೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಕುಟುಂಬದವರು ಪೊಲೀಸರಿಗೆ ನೀಡಿದ ದೂರು ಹಾಗೂ ಸಾಕ್ಷ್ಯಾಧಾರದ ಮೇಲೆ ಶಾಂತಿನಗರದ ರೀನಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯ ಮನೆಯ ಕುಟುಂಬ ಸದಸ್ಯರು ಯಕೃತ್ತು ಸಂಬಂಧಿತ ಕಾಯಿಲೆಗಳಿಂದ ನಿರಂತರವಾಗಿ ಬಳಲುತ್ತಿದ್ದರು. ಎಷ್ಟೇ ಔಷಧಿ ಮಾಡಿದರೂ ಕಡಿಮೆಯಾಗದಿದ್ದಾಗ ಈ ಘಟನೆ ಗಮನಕ್ಕೆ ಬಂದಿದೆ. ವೈದ್ಯರು ಅನೈರ್ಮಲ್ಯ ವಾತಾವರಣದ ಆಹಾರ ಸೇವಿಸುತ್ತಿರುವುದೇ ಪದೇ ಪದೇ ಅನಾರೋಗ್ಯಕ್ಕೆ ಕಾರಣ ಎಂದು ಹೇಳಿದ್ದಾರೆ. ಆಗ ಸಂಶಯ ಬಂದ ಮನೆಯ ಯಜಮಾನ ನಿತಿನ್ ಗೌತಮ್ ಅಡುಗೆ ಮನೆಯಲ್ಲಿ ಮನೆಕೆಲಸಾದಕೆ ಅಡುಗೆ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ್ದಾನೆ, ಅಲ್ಲದೆ, ಗೌತಮ್ ತನ್ನ ಮೊಬೈಲ್ ಫೋನ್ ಕ್ಯಾಮೆರಾವನ್ನು ಅಡುಗೆಮನೆಯಲ್ಲಿ ರಹಸ್ಯವಾಗಿ ಇಟ್ಟು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಆಗ ಮನೆಯ ಅಡುಗೆ ಕೆಲಸದಾಕೆ ಚಪಾತಿಯ ಹಿಟ್ಟಿನಲ್ಲಿ ತನ್ನದೇ ಮೂತ್ರ ಬೆರೆಸುತ್ತಿರುವುದು ಕಂಡು ಗಾಬರಿಗೊಂಡಿದ್ದಾರೆ. ಈ ಸಂಬಂಧ ಕಳೆದ ಸೋಮವಾರ(ಅ.14) ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕುಟುಂಬ ಸದಸ್ಯರು ನೀಡಿದ ದೂರು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಂಗಳವಾರ ಮನೆ ಕೆಲಸದಾಕೆ ರೀನಾ ಎಂಬಾಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ರೀನಾ ಆರಂಭದಲ್ಲಿ ಆರೋಪವನ್ನು ನಿರಾಕರಿಸಿದ್ದು, ಆದರೆ ನಂತರ, ವೀಡಿಯೊವನ್ನು ತೋರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. Click