ತುಳುನಾಡಿನ ದೈವಗಳ ವೇಷದಲ್ಲಿ ವರಾಹನ ಮೇಲೆ ಕುಳಿತ ಗಣಪತಿ..! ಕರಾವಳಿ ಜನರಿಂದ ತೀವ್ರ ಆಕ್ರೋಶ

ನ್ಯೂಸ್ ನಾಟೌಟ್: ರಿಷಬ್‌ ಶೆಟ್ಟಿಯ ʼಕಾಂತಾರʼ ಸಿನಿಮಾ ಬಂದ ಬಳಿಕ ತುಳುನಾಡಿನ ದೈವಗಳ ವೇಷ -ಭೂಷಣ ತೊಟ್ಟು ದೈವಗಳ ಆರಾಧಕರ ಮನಸ್ಸಿಗೆ ನೋವುಂಟು ಮಾಡುವ ಅನಾಚಾರಗಳು ಹೆಚ್ಚಾಗಿವೆ. ಅಂತದ್ದೇ ಘಟನೆ ಮುಂಬಯಿನಲ್ಲಿ ನಡೆದಿದೆ. ಗಣೇಶ್‌ ಚತುರ್ಥಿ ಹಬ್ಬಕ್ಕಾಗಿ ತಯಾರಾದ ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ದೈವಗಳ ವಿಚಾರವನ್ನಿಟ್ಟುಕೊಂಡು ಹಾಸ್ಯಾಸ್ಪದವಾಗಿ ವರ್ತಿಸುವವರ ವಿರುದ್ಧ ತುಳುನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅನೇಕ ಬಾರಿ ಹಲವರನ್ನು ತರಾಟೆಗೆ ತೆಗೆದುಕೊಂಡದ್ದೂ ಇದೆ. View this post on Instagram A post shared by RaviNdra KesarKar (@kesarkarravindra) ಕಾಂತಾರʼ ಸಿನಿಮಾದಲ್ಲಿನ ಪಂಜುರ್ಲಿ ದೈವ ಲುಕ್‌ಗೆ ಗಣೇಶನ ಸೊಂಡಿಲು ಕೂರಿಸಿರುವುದನ್ನು ಗಮನಿಸಿರುವ ಕರಾವಳಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರದಲ್ಲಿ ಕೋಪರ್ಖೈರನೆನಲ್ಲಿ ಈ ಗಣೇಶ ವಿಗ್ರಹವನ್ನು ಸಿದ್ಧಪಡಿಸಲಾಗಿದೆ ಎಂದು ವರದಿ ತಿಳಿಸಿದೆ. Click